ನವದೆಹಲಿ: ಶಾಲಾ, ಕಾಲೇಜುಗಳ ಪಠ್ಯಗಳಲ್ಲಿ ’ತುರ್ತು ಪರಿಸ್ಥಿತಿ’ಯ ಬಗ್ಗೆ ಪಾಠವನ್ನು ಅಳವಡಿಸಿಕೊಳ್ಳುವುದನ್ನು ಆರ್ಎಸ್ಎಸ್ ಪರ ನಿಯತಕಾಲಿಕೆ ಸಮರ್ಥಿಸಿಕೊಂಡಿದೆ.
ಹೊಸ ತಲೆಮಾರಿಗೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ ತುರ್ತುಪರಿಸ್ಥಿತಿಯ ಬಗ್ಗೆ ತಿಳಿಸುವುದು ಅತ್ಯಗತ್ಯ ಎಂದಿರುವ ’ಆರ್ಗನೈಸರ್’ ನಿಯತಕಾಲಿಕೆಯ ಲೇಖನ, ಶಾಲಾ ಕಾಲೇಜುಗಳ ಪಠ್ಯದಲ್ಲಿ ಇದನ್ನು ಅಳವಡಿಸಿರುವುದು ಉತ್ತಮ ಬೆಳವಣಿಗೆ ಎಂದಿದೆ.
’ಸ್ವಾತಂತ್ರ್ಯ ಚಳುವಳಿಯ ಬಳಿಕ ತುರ್ತುಪರಿಸ್ಥಿತಿ ದೊಡ್ಡ ಹೋರಾಟ, ಜನ ಸಂಘಟಿತರಾಗಿ ಹೋರಾಟ ನಡೆಸಿದ್ದರು. ಹೀಗಾಗಿ ಹೊಸ ತಲೆಮಾರು ಇದರ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ರಾಜಕೀಯ ಪಕ್ಷ ಪ್ರಜಾಪ್ರಭುತ್ವದ ಹತ್ಯೆಗೆ ನಡೆಸಿದ ಪ್ರಯತ್ನವನ್ನು ಮತ್ತು ಅದರ ವಿರುದ್ಧ ಜನ ನಡೆಸಿದ ಹೋರಾಟವನ್ನು ಅವರಿಗೆ ಹೇಳಬೇಕಾಗಿದೆ’ ಎಂದು ಲೇಖನ ಹೇಳಿದೆ.
ತುರ್ತುಪರಿಸ್ಥಿತಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳ ಹಂತ, ಇಲ್ಲಿ ರಾಜಕೀಯ ಪಕ್ಷವೊಂದು ಅಧಿಕಾರದ ದಾಹಕ್ಕೆ ದೇಶದ ವಿರುದ್ಧ ಅಪರಾಧ ಕೃತ್ಯ ಎಸಗಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.