ನವದೆಹಲಿ: ವಿವಿಧ ಮೂಲಗಳಿಂದ ಶುಲ್ಕ ರಹಿತ ಆದಾಯ ವೃದ್ಧಿಸಲು ರೈಲ್ವೆ ಇಲಾಖೆ ದೇಶದಾದ್ಯಂತ ರೈಲು ನಿಲ್ಧಾಣಗಳ ತ್ಯಾಜ್ಯ ಮಾರಾಟಕ್ಕೆ ಪ್ರಸ್ತಾಪಿಸಿದೆ.
ರೈಲ್ವೆ ನಿಲ್ದಾಣಗಳಿಂದ ಸಂಗ್ರಹಿಸಲಾಗುವ ಪ್ರತಿ ಕೆ.ಜಿ. ತ್ಯಾಜ್ಯಕ್ಕೆ ರೂ.1.50 ನೀಡುವ ತ್ಯಾಜ್ಯ ನಿರ್ವಹಣಾ ಸಂಸ್ಥೆಯೊಂದರ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಕು ಮತ್ತು ಪ್ರಯಾಣ ದರ ಅಲ್ಲದೇ ಇತರ ಮೂಲಗಳಿಂದ ಆದಾಯ ಸೃಷ್ಟಿಸಲು ರೈಲ್ವೆ ಪ್ರತ್ಯೇಕ ಶುಲ್ಕ ರಹಿತ ಆದಾಯ ನಿರ್ದೇಶನಾಲಯವನ್ನು ಸ್ಥಾಪಿಸಿದೆ. ತ್ಯಾಜ್ಯ ನಿರ್ವಹಣಾ ಸಂಸ್ಥೆ ರೈಲ್ವೆ ನಿಲ್ದಾಣಗಳಿಂದ ತ್ಯಾಜ್ಯನ್ನು ಸಂಗ್ರಹಿಸಲಿದೆ. ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಸಂಸ್ಥೆಯ ಜವಾಬ್ದಾರಿ ಆಗಿರಲಿದ್ದು, ತ್ಯಾಜ್ಯವನ್ನು ಮರುಬಳಕೆ ಇಂಧನ ಅಥವಾ ಗೊಬ್ಬರವನ್ನಾಗಿ ಬಳಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯು 12 ರೈಲು ನಿಲ್ದಾಣಗಳಾದ ಅಮೃತಸರ, ಅಂಬಾಲ, ಜಮ್ಮು, ಹರಿದ್ವಾರ, ಕತ್ರಾ, ದೆಹ್ರಾಡೂನ್, ಮೊರಾದಾಬಾದ್, ಸಹರನ್ಪುರ್, ಸಿಎಸ್ಟಿ, ಮುಂಬಯಿ ಸೆಂಟ್ರಲ್ ಹಾಗೂ ದಾದರ್ಗಳಲ್ಲಿ ತ್ಯಾಜ್ಯ ಸಂಗ್ರಹಣೆ, ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಲಿದ್ದು, ರೈಲ್ವೆ ಆದಾಯ ಹೆಚ್ಚಿಸಲಿದೆ ಎಂದು ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.