ನವದೆಹಲಿ: ಎಪ್ರಿಲ್ ತಿಂಗಳಿನಿಂದಲೇ ಹಣಕಾಸು ವರ್ಷ ಆರಂಭವಾಗಬೇಕೇ ಅಥವಾ ಇತರ ದಿನಾಂಕದಂದೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ.
ಚೀನಾ, ಬ್ರೆಝಿಲ್, ರಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳು ಕ್ಯಾಲೆಂಡರ್ ಇಯರ್ ಮಾಡೆಲ್ನಲ್ಲೇ ಹಣಕಾಸು ವರ್ಷವನ್ನೂ ಅನುಸರಿಸುತ್ತವೆ. ಭಾರತ ಬ್ರಿಟಿಷ್ ಮಾಡೆಲ್ನಂತೆ ಎಪ್ರಿಲ್ 1ರಿಂದ ಹಣಕಾಸು ವರ್ಷವನ್ನು ಅನುಸರಿಸುತ್ತದೆ. ಕೆಲ ದೊಡ್ಡ ಆರ್ಥಿಕ ದೇಶಗಳು ಕ್ಯಾಲೆಂಡರ್ ಇಯರ್ ಅನುಸರಿಸುವುದಿಲ್ಲ. ಆಮೆರಿಕಾದಲ್ಲಿ ಅ.1ರಂದು ಹಣಕಾಸು ವರ್ಷ ಆರಂಭವಾದರೆ, ಜಪಾನ್ ಮತ್ತು ದಕ್ಷಿಣ ಆಫ್ರಿಕಾಗಳು ಎಪ್ರಿಲ್-ಮಾರ್ಚ್ ಸರ್ಕಲ್ನ್ನು ಅನುಸರಿಸುತ್ತವೆ.
ಇದೀಗ ಭಾರತವೂ ಹಣಕಾಸು ವರ್ಷವನ್ನು ಬದಲಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದ್ದು, ಇದಕ್ಕಾಗಿ ವಿತ್ತ ಸಚಿವಾಲಯ ಸಮಿತಿಯೊಂದನ್ನು ರಚನೆ ಮಾಡಿದೆ. ಇದರ ನೇತೃತ್ವವನ್ನು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಶಂಕರ್ ಆಚಾರ್ಯ ವಹಿಸಿಕೊಳ್ಳಲಿದ್ದಾರೆ.
ವಿವಿಧ ದಿನಾಂಕಗಳ ಮೆರಿಟ್, ಡಿಮೆರಿಟ್ಗಳನ್ನು ಈ ಸಮಿತಿ ಪರಿಶೀಲನೆಗೊಳಪಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.