ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕೇಂದ್ರದ ಸಂಪುಟ ಪುನರ್ರಚನೆಯ ವೇಳೆ ಎಲ್ಲಾ ರಾಜಕಾರಣಿಗಳು, ಬಿಜೆಪಿ ಮುಖಂಡರು ಹಾಜರಿದ್ದರು. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೈರಾಗಿದ್ದರು.
ಇದನ್ನು ಗಮನಿಸಿದ ಮಾಧ್ಯಮಗಳು ತಕ್ಷಣ ತಮ್ಮ ತಮ್ಮ ಚಾನೆಲ್ಗಳಲ್ಲಿ, ‘ಪ್ರಮಾಣವಚನ ಸಮಾರಂಭ ತಪ್ಪಿಸಿಕೊಂಡ ಸುಷ್ಮಾ’ ಎಂಬ ವಿವಿಧ ಹೆಡ್ಲೈನ್ ನೀಡಲಾರಂಭಿಸಿದವು.
ಆದರೆ ಸುಷ್ಮಾ ಅವರು ಹಂಗೇರಿ ವಿದೇಶಾಂಗ ಸಚಿವರೊಂದಿಗೆ ಮೀಟಿಂಗ್ನಲ್ಲಿದ್ದ ಕಾರಣ ಸಮಾರಂಭಕ್ಕೆ ಆಗಮಿಸಿರಲಿಲ್ಲ, ತನ್ನ ಗೈರನ್ನು ಮಾಧ್ಯಮಗಳು ಗಮನಿಸುತ್ತವೆ, ದೊಡ್ಡ ಸುದ್ದಿಯಾಗುತ್ತದೆ ಎಂಬುದು ಅವರಿಗೆ ಚೆನ್ನಾಗಿಯೇ ತಿಳಿದಿತ್ತು.
ಒಂದು ಬಾರಿ ಈ ಮಾಧ್ಯಮಗಳಲ್ಲಿ ತನ್ನ ಗೈರು ದೊಡ್ಡ ಸುದ್ದಿಯಾಗುತ್ತಿದ್ದಂತೆ ಟ್ವಿಟರ್ನಲ್ಲಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಮೀಡಿಯಾ-’ಸುಷ್ಮಾ ಸ್ಕಿಪ್ಸ್ ಓತ್ ಸೆರಮನಿ’ ಹೆಡ್ಲೈನನ್ನು ತೆಗೆದುಹಾಕಿ ಎಂದು ಟ್ವಿಟ್ ಮಾಡಿದರು.
ಅವರ ಈ ಟ್ವಿಟ್ 1500 ಬಾರಿ ಒಂದು ಗಂಟೆಯೊಳಗೆ ರಿಟ್ವಿಟ್ ಆಗಿದೆ. ೨೦೦೦ ಲೈಕ್ ಸಿಕ್ಕಿದೆ. ಒಟ್ಟಿನಲ್ಲಿ ಇಂಟರ್ನೆಟ್ನಲ್ಲಿ ಇದು ವೈರಲ್ ಆಗಿದೆ.
ಚಿಕಿತ್ಸೆಗಿಂತ ತಡೆಗಟ್ಟುವುದು ಉತ್ತಮ, ನಿಮ್ಮ ನಡೆ ಜಾಣ್ಮೆಯಿಂದ ಕೂಡಿದೆ ಮ್ಯಾಮ್ ಎಂಬಿತ್ಯಾದಿ ಪ್ರತಿಕ್ರಿಯೆಗಳನ್ನು ಅವರ ಅಭಿಮಾನಿಗಳು ಟ್ವಿಟರ್ನಲ್ಲಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.