ಮುಂಬಯಿ: ವಿಶ್ವ ವಿಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಜಗದ್ವಿಖ್ಯಾತ ಪುರಿ ರಥ ಯಾತ್ರೆಯ ವಾರ್ಷಿಕ ಆಚರಣೆಯ ಸ್ಮರಣಾರ್ಥ 100 ಮರಳಿನ ರಥಗಳನ್ನು ರಚಿಸಿ ಗೌರವ ಸಲ್ಲಿಸಿದರು.
100 ರಥಗಳನ್ನು ರಚಿಸಲು ಅವರು 3 ದಿನ ಮತ್ತು 20 ಗಂಟೆಗಳನ್ನು ತೆಗೆದುಕೊಂಡಿದ್ದರು. ಈ ರಥಗಳ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸುವ ಗುರಿ ಅವರದ್ದು.
ಈ ರಥಗಳನ್ನು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು ಪುರಿ ಬೀಚ್ನಲ್ಲಿ ಉದ್ಘಾಟನೆಗೊಳಿಸಿದ್ದರು.
ಜಗ್ನನಾಥನ ಆಶೀರ್ವಾದದಿಂದ ನೂರು ಮರಳಿನ ರಥಗಳನ್ನು ರಚಿಸಿದ್ದು, ಲಿಮ್ಕಾದಾಖಲೆಯ ಪುಟವನ್ನು ಸೇರುವ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದೇವೆ ಎಂದು ಪಟ್ನಾಯಕ್ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.