ನವದೆಹಲಿ: ಢಾಕಾದ ರೆಸ್ಟೋರೆಂಟ್ಗೆ ನುಗ್ಗಿ 20 ಜನರ ರಕ್ತ ಹರಿಸಿದ 7 ಮಂದಿ ಉಗ್ರರ ಪೈಕಿ ಇಬ್ಬರು ಮುಂಬಯಿ ಮೂಲದ ವಿವಾದಾತ್ಮಕ ಮುಸ್ಲಿಂ ಬೋಧಕ ಝಾಕೀರ್ ನಾಯ್ಕ್ನ ಅನುಯಾಯಿಗಳಾಗಿದ್ದರು ಎಂಬ ಅಂಶ ಬಹಿರಂಗಗೊಂಡಿದೆ.
ಅವಾಮಿ ಲೀಗ್ ಪಕ್ಷದ ಸದಸ್ಯನ ಮಗನಾದ ರೋಹನ್ ಇಮ್ತಿಯಾಝ್ ಎಂಬ ದಾಳಿಕೋರ ಝಾಕೀರ್ ನಾಯ್ಕ್ ಪೀಸ್ ಟಿವಿಯಲ್ಲಿ ನೀಡುತ್ತಿದ್ದ ಬೋಧನೆಗಳಿಂದ ಪ್ರಭಾವಿತನಾಗಿದ್ದ. ಅಲ್ಲದೇ ಕಳೆದ ವರ್ಷ ಎಲ್ಲಾ ಮುಸ್ಲಿಮರು ಭಯೋತ್ಪಾದಕರಾಗಬೇಕು ಎಂಬ ಈತ ನೀಡಿದ ಕರೆಯೇ ರೋಹನ್ನನ್ನು ಉಗ್ರವಾದದತ್ತ ಸೆಳೆದಿತ್ತು ಎಂದು ಹೇಳಲಾಗಿದೆ.
ಇಸಿಸ್ ಪ್ರಚಾರಕ ಮೆಹದಿ ಮಸ್ರೂರ್ ಬಿಸ್ವಾವ್ ಕೂಡ ಈತನಿಗೆ ಪ್ರೇರಣೆ ನೀಡಿದ್ದ ಎನ್ನಲಾಗಿದೆ.
ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ನ ಸ್ಥಾಪಕನಾಗಿರುವ ಝಾಕೀರ್, ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾನೆ. ಇಸ್ಲಾಂ ಒಂದೇ ಸತ್ಯ, ಇತರ ಎಲ್ಲಾ ಧರ್ಮಗಳು ಸುಳ್ಳು ಎಂಬುದು ಈತನ ಪ್ರತಿಪಾದನೆ. ಬೋಧನೆಗಳಲ್ಲಿ ಇತರ ಧರ್ಮಗಳನ್ನು ಹೀಯಾಳಿಸುವುದೂ ಈತನ ಚಟ.
50 ವರ್ಷದ ವೈದ್ಯನಾಗಿರುವ ಈತ ಒಸಾಮ ಬಿನ್ ಲಾದೆನ್ನನ್ನು ಉಗ್ರನೆಂಬುದನ್ನು ಒಪ್ಪುವುದಿಲ್ಲ. ಯುಕೆ, ಮಲೇಷ್ಯಾ, ಕೆನಡಾಗಳು ಈತನಿಗೆ ಪ್ರವೇಶ ನಿಷೇಧಿಸಿವೆ.
‘ಮುಸ್ಲಿಂರೆಲ್ಲಾ ಭಯೋತ್ಪಾದಕರಾಗಬೇಕು. ಭಯ ಹುಟ್ಟಿಸುವವರ ಭಯೋತ್ಪಾದಕ, ಪೊಲೀಸ್ನನ್ನು ಕಂಡ ತಕ್ಷಣ ಕಳ್ಳ ಭಯಭೀತನಾಗುತ್ತಾನೆ. ಹೀಗಾಗಿ ಕಳ್ಳನಿಗೆ ಪೊಲೀಸ್ ಭಯೋತ್ಪಾದಕ, ಈ ನಿಟ್ಟಿನಲ್ಲಿ ಎಲ್ಲಾ ಮುಸ್ಲಿಮರು ಭಯೋತ್ಪಾದಕರಾಗಬೇಕು’ ಎಂದು ಈತ ಪ್ರವಚನ ನೀಡಿ ವಿವಾದಕ್ಕೀಡಾಗಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.