ನವದೆಹಲಿ : ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನಾರಚನೆ ಇಂದು ನಡೆದಿದ್ದು 19 ನೂತನ ಸಚಿವರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಮಾಣ ವಚನ ಬೋಧಿಸಿದರು.
ಪ್ರಪ್ರಥಮವಾಗಿ ಪ್ರಕಾಶ್ ಜಾವ್ಡೇಕರ್ ಪ್ರಮಾಣ ವಚನ ಸ್ವೀಕರಿಸಿದರು. ಪರಿಸರ ಸಚಿವರಾಗಿದ್ದ ಇವರನ್ನು ಕ್ಯಾಬಿನೆಟ್ ದರ್ಜೆಗೆ ಏರಿಸಲಾಗಿದೆ.
ನೂತನ ಸಚಿವರುಗಳಾಗಿ ಫಗ್ಗಾನ್ ಸಿಂಗ್ ಕುಲಾಸ್ತೆ -ಮಧ್ಯಪ್ರದೇಶ, ಎಸ್ ಎಸ್ ಅಹ್ಲುವಾಲಿಯ – ಡಾರ್ಜಿಲಿಂಗ್, ರಮೇಶ್ ಚಂದಪ್ಪ ಜಿಗಜಿಣಗಿ – ಕರ್ನಾಟಕ, ವಿಜಯ್ ಗೋಯಲ್ – ರಾಜಸ್ಥಾನ, ರಾಮದಾಸ್ ಅಠವಾಳೆ – ಮಹಾರಾಷ್ಟ್ರ, ರಾಜನ್ ಗೋಹೈನ್ -ಅಸ್ಸಾಂ, ಅನಿಲ್ ಮಾಧವ ದಾವೆ – ಮಧ್ಯಪ್ರದೇಶ, ಪುರುಷೋತ್ತಮ ರೂಪಾಲ – ಗುಜರಾತ್, ಎಂ. ಜೆ. ಅಕ್ಬರ್ – ಮಧ್ಯಪ್ರದೇಶ, ಅರ್ಜುನ್ ರಾಂ ಮೇಘವಾಲ್ -ರಾಜಸ್ಥಾನ, ಜಸ್ವಂತಸಿನ್ಹ ಭಬೋರ್ – ಗುಜರಾತ್ , ಅಜಯ್ ತಮಟಾ – ಉತ್ತರಾಖಂಡ, ಕೃಷ್ಣಾ ರಾಜ್ – ಉತ್ತರಪ್ರದೇಶ, ಮನ್ಸುಕ್ ಎಲ್. ಮಾಂಡವೀಯ – ಗುಜರಾತ್, ಅನುಪ್ರಿಯಾ ಪಟೇಲ್ – ಉತ್ತರಪ್ರದೇಶ, ಸಿ. ಆರ್. ಚೌಧರಿ – ರಾಜಸ್ಥಾನ, ಪಿ.ಪಿ. ಚೌಧರಿ – ರಾಜಸ್ಥಾನ, ಸುಭಾಷ್ ಭಾಮ್ರೆ – ಮಹಾರಾಷ್ಟ್ರ ಇವರುಗಳು ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ರಾಜ್ ನಾಥ್ ಸಿಂಗ್ ಸೇರಿದಂತೆ ಎಲ್ಲ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಕೇಂದ್ರ ಸಚಿವ ಸಂಪುಟದಿಂದ 5 ಮಂದಿ ರಾಜ್ಯ ಸಚಿವರನ್ನು ಕೈಬಿಡಲಾಗಿದೆ. ಸನ್ವರ್ ಲಾಲ್ ಜಾಟ್ (ಜಲ ಸಂಪನ್ಮೂಲ ಸಚಿವ), ನಿಹಾಲ್ಚಂದ್ (ಪಂಚಾಯತ್ರಾಜ್), ರಾಮ್ ಶಂಕರ್ ಕತೇರಿಯಾ (ಎಚ್ಆರ್ಡಿ), ಮನ್ಸುಖ್ ಭಾಯ್ ವಾಸವ (ಬುಡಕಟ್ಟು ವ್ವವಹಾರ) ಮತ್ತು ಮೋಹನ್ಭಾಯ್ ಕುಂದಾರಿಯಾ (ಕೃಷಿ ಸಚಿವ) ಇವರನ್ನು ಕೈಬಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.