ಢಾಕಾ: ಬಾಂಗ್ಲಾದೇಶ ಎಂದೂ ಕಂಡು ಕೇಳರಿಯದ ರೀತಿಯ ಉಗ್ರರ ದಾಳಿ ನಡೆಯಲು ತನ್ನ ನೆಲದ ಭಯೋತ್ಪಾದಕರು ಮತ್ತು ಪಾಕಿಸ್ಥಾನದ ಗುಪ್ತಚರ ಸಂಘಟನೆ ಐಎಸ್ಐ ಕಾರಣ ಎಂದು ಬಾಂಗ್ಲಾ ಗಂಭೀರ ಆರೋಪ ಮಾಡಿದೆ.
ರೆಸ್ಟೋರೆಂಟ್ ಒಳಗೆ ದಾಳಿ ನಡೆಸಿ ಅಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿಸಿ, ಬಳಿಕ 20 ಮಂದಿಯನ್ನು ಕೊಂದ ಘಟನೆ ಶುಕ್ರವಾರ ಢಾಕಾದಲ್ಲಿ ನಡೆದಿತ್ತು. ಈ ಹಿನ್ನಲೆಯಲ್ಲಿ ಬಾಂಗ್ಲಾದಲ್ಲಿ ಎರಡು ದಿನ ಶೋಕಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ವೇಳೆ ಹೇಳಿಕೆ ನೀಡಿರುವ ಬಾಂಗ್ಲಾದ ಗೃಹ ಸಚಿವ ಅಸಾದುಝಮ್ಮಾನ್ ಖಾನ್, ಒತ್ತೆಯಾಗಿರಿಸಿಕೊಂಡ ಉಗ್ರರೆಲ್ಲಾ ಈ ನೆಲದಲ್ಲಿ ಬೆಳೆದವರೇ ಹೊರತು ಇಸಿಸ್ ಸದಸ್ಯರಲ್ಲ ಅಥವಾ ಇತರ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗೆ ಸೇರಿದವರಲ್ಲ ಎಂದಿದ್ದಾರೆ.
ಎಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅವರ ಪೂವರ್ಜರೆಲ್ಲಾ ಬಾಂಗ್ಲಾಗೆ ಸೇರಿದವರು. ಅವರು ಜಮಾತ್ ಉಲ್ಮುಜಾಹಿದ್ದೀನ್ ಬಾಂಗ್ಲಾದೇಶ್ನಂತಹ ದೇಶಿ ಸಂಘಟನೆಗೆ ಸೇರಿದವರು ಎಂದಿದ್ದಾರೆ. ಅಲ್ಲದೇ ಇವರಿಗೆ ಐಎಸ್ಐನ ಸಂಪರ್ಕವಿದೆ ಎಂದು ತಿಳಿಸಿದ್ದಾರೆ.
ಆದರೆ ಇಸಿಸ್ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.