News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

rallyಜೈಪುರ: ತಮ್ಮ ಮಗ  ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಎಎಪಿ ಸಮಾವೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಗಜೇಂದ್ರ ಸಿಂಗ್ ಅವರ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಜೇಂದ್ರ ತಂದೆ ಬನ್ನೆ ಸಿಂಗ್ ‘ಅರವಿಂದ್ ಕೇಜ್ರಿವಾಲ್ ಅವರ ತಪ್ಪಿನಿಂದಾಗಿ ನನ್ನ ಮಗ ಸತ್ತಿದ್ದಾನೆ. ಈಗ ಅವರು ಕ್ಷಮೆ ಕೇಳಿದರೆ ಏನು ಪ್ರಯೋಜನ? ಅವರ ಕ್ಷಮೆಯಿಂದ ನನ್ನ ಮಗ ಬದುಕಿ ಬರಲಾರ’ ಎಂದಿದ್ದಾರೆ,

‘ಅಣ್ಣನ ಆತ್ಮಹತ್ಯೆ ಘಟನೆಯ ಬಳಿಕವೂ ಕೇಜ್ರಿವಾಲ್ ತಮ್ಮ ಸಮಾವೇಶ ನಿಲ್ಲಿಸಿರಲಿಲ್ಲ. ನನ್ನ ಅಣ್ಣ ಆತ್ಮಹತ್ಯೆ ಮಾಡಿಕೊಳ್ಳುವಂತೆ ಉತ್ತೇಜಿಸಲಾಗಿದ್ದು, ಆತ್ಮಹತ್ಯೆಯ ಹಿಂದೆ ಕಾಣದ ಕೈಗಳ ಪಿತ್ತೂರಿ ಅಡಗಿದೆ. ಸತ್ಯಾಂಶ ಹೊರಬರಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಗಜೇಂದ್ರ ಸಿಂಗ್ ಅವರ ಸೋದರಿ ರೇಖಾ ಒತ್ತಾಯಿಸಿದ್ದಾರೆ.

ಸಿಬಿಐ ತನಿಖೆ ನಡೆಸುವಂತೆ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಬೇಕು ಎಂದು ಗಜೇಂದ್ರ ಅವರ ಚಿಕ್ಕಪ್ಪ ರಾಜಸ್ಥಾನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top