ನವದೆಲಿ: ರೈಲ್ವೆ ಬಜೆಟ್ನಲ್ಲಿ ಘೋಷಣೆ ಮಾಡಿರುವಂತೆ ಭಾರತ ಸರ್ಕಾರ 100 ಕೋಟಿ ವೆಚ್ಚದಲ್ಲಿ ದೇಶದ 400 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಮುಂದಾಗಿದೆ.
ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳಲ್ಲಿ ಸುಚಿತ್ವ ಕಾಪಾಡಲು ಕ್ರಮ ಕೈಹೊಳ್ಳಲಾಗುತ್ತಿದ್ದು, ಅದು ತನ್ನದೇ ಆದ ಹೆಲಿಪ್ಯಾಡ್, ಲಾಂಜ್, ಆಗಮನ-ನಿರ್ಗಮನ ಟರ್ಮಿನಲ್ಗಳನ್ನು ಹೊಂದಲಿದೆ.
ಫ್ರಾನ್ಸ್ನ ಎಸ್ಎನ್ಸಿಎಫ್ ರಾಷ್ಟ್ರೀಯ ರೈಲು ಕಂಪೆನಿ ಅಂಬಾಲಾ ಮತ್ತು ಲೂಧಿಯಾನಾ ರೈಲ್ವೆ ಸ್ಟೇಷನ್ಗಳ ಅಭಿವೃದ್ಧಿಗೆ ಸಹಕರಿಸುತ್ತಿದ್ದು, ದೆಹಲಿ ರೈಲು ನಿಲ್ದಾಣದ ಪರಿಶೀಲನೆ ನಡೆಸುತ್ತಿದೆ. ಜಪಾನ್, ದ.ಕೋರಿಯಾ, ಸ್ವಜರ್ಲ್ಯಾಂಡ್, ಆಸ್ಟ್ರಿಐಆ, ಬೆಲ್ಜಿಯಂ ರಾಷ್ಟ್ರಗಳು ಕೂಡ ಪರಿಣಿತ ತಜ್ಞರನ್ನು ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಉತ್ತರ ಪ್ರದೇಶ 12 ವಿಶ್ವ ದರ್ಜೆಯ ಸ್ಟೇಷನ್ಗಳನ್ನು ಹೊಂದಲಿದ್ದು, ಭಾರತದಲ್ಲೇ ಅತೀ ಹೆಚ್ಚು ಸ್ಟೇಷನ್ಗಳನ್ನು ಹೊಂದಿದ ರಾಜ್ಯವಾಗಲಿದೆ ಎನ್ನಲಾಗಿದೆ.
ವಿಶ್ವ ದರ್ಜೆಯ ರೈಲ್ವೆ ನಿಲ್ದಾಣಗಳನ್ನು ಬಹು ಸಾರಿಗೆ ಕೇಂದ್ರಗಳಾಗಿ ವಿನ್ಯಾಸಗೊಳಿಸಲಾಗುವುದು. ಆನದಟ್ಟಣೆ ಕಡಿಮೆ ಮಾಡಲು ಸಾಕಷ್ಟು ಆಸಗಳು ಮತ್ತು ಸ್ಥಳಾವಕಾಶ ಇರಲಿದ್ದು, ಅನೇಕ ಆಗಮನ/ ನಿರ್ಗಮನ ದ್ವಾರಗಳನ್ನು ಹೊಂದಲಿದೆ ಎಂದು ರೈಲ್ವೆ ವಕ್ತಾರ ಅನಿಲ್ ಸಕ್ಸೇನಾ ಹೇಳಿದ್ದಾರೆ.
ಭಾರತೀಯ ರೈಲ್ವೆ ಗುಜರಾತ್, ದೆಹಲಿ, ಚಂಡೀಗಢ್, ಪುಣೆ, ಮೊಹಾಲಿಗಳಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಯೋಜನೆಗಳ ಹರಾಜು ಪ್ರಕ್ರಿಯೆಗೆ ವಿದೇಶಿ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.