ಹೈದರಾಬಾದ್: 11 ಶಂಕಿತ ಇಸಿಸ್ ಉಗ್ರರನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ತಂಡ ಇದೀಗ ಅವರು ರೂಪಿಸಿದ್ದ ಸಂಚುಗಳನ್ನು ಒಂದೊಂದಾಗಿಯೇ ಬಯಲು ಮಾಡುತ್ತಿದೆ.
ಹೈದರಾಬಾದ್ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಾಕಿದ್ದ ಇವರು, ದೇಗುಲದೊಳಗೆ ಗೋಮಾಂಸವನ್ನು ಇಟ್ಟು ರಂಜಾನ್ ತಿಂಗಳಲ್ಲಿ ಕೋಮು ಗಲಭೆಯನ್ನು ಸೃಷ್ಟಿ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.
ಐತಿಹಾಸಿಕ ಚಾರ್ ಮಿನಾರ್ ಸಮೀಪವಿರುವ ಭಾಗ್ಯಲಕ್ಷ್ಮೀ ದೇಗುಲದೊಳಗೆ ದನ ಅಥವಾ ಎತ್ತಿನ ಮಾಂಸವನ್ನು ಇರಿಸಲು ಇವರು ಸಂಚು ರೂಪಿಸಿದ್ದರು, ಇದರಿಂದ ಕೋಮು ಗಲಭೆ ಸೃಷ್ಟಿಯಾಗುತ್ತದೆ ಎಂಬ ಯೋಚನೆ ಇವರದಾಗಿತ್ತು.
ಆದರೆ ಅದೃಷ್ಟವಶಾತ್ ರಾಷ್ಟ್ರೀಯ ತನಿಖಾ ತಂಡ ಇವರ ಎಲ್ಲಾ ಯೋಜನೆಯನ್ನು ತಲೆಕೆಳಗೆ ಮಾಡಿದ್ದು, ಅವರಿಂದ ಸಾಕಷ್ಟು ಪ್ರಮಾಣದ ಸ್ಫೋಟಕ, ಪಿಸ್ತೂಲ್ಗಳನ್ನು ವಶಕ್ಕೆ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.