ಮೀರತ್: ಪಾಕಿಸ್ಥಾನ ಕೊನೆಗೂ 91 ವರ್ಷದ ಭಾರತೀಯ ಪ್ರಜೆಗೆ ಪಾಕಿಸ್ಥಾನದಲ್ಲಿರುವ ತನ್ನ ಪೂರ್ವಜರ ಮನೆಗೆ ಆಗಮಿಸಲು ಅನುಮತಿಯನ್ನು ನೀಡಿದೆ. ಈ ಮೂಲಕ ಅವರ ಕೊನೆಯ ಆಸೆಯನ್ನು ನೆರವೇರಿಸಲು ಸಹಾಯ ಮಾಡಿದೆ.
91 ವರ್ಷ ಪ್ರಾಯದ ಕೃಷ್ಣ ಖನ್ನಾ ಪಾಕಿಸ್ಥಾನದ ಉಧೋಕೆಯವರು, ೧೯೩೦ರಲ್ಲಿ ತನ್ನ ಬಾಲ್ಯವನ್ನು ಅಲ್ಲಿ ಕಳೆದ ಸವಿ ನನೆಪು ಇಂದಿಗೂ ಅವರಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ 1947ರಲ್ಲಿ ವಿಭಜನೆಯಾದ ಬಳಿಕ ಅವರ ಕುಟುಂಬ ಬಲವಂತವಾಗಿ ಭಾರತಕ್ಕೆ ಬಂದು ನೆಲೆಸಬೇಕಾಯಿತು.
ವಿಭಜನೆಯ ವೇಳೆ ನಡೆದ ರಕ್ತಪಾತ, ತನ್ನ ಕುಟುಂಬ ಎದುರಿಸಿದ ಕಷ್ಟದ ದಿನಗಳು ಇಂದಿಗೂ ಅವರಿಗೆ ನನೆಪಿದೆ. ಆದರೆ ಪಾಕಿಸ್ಥಾನವನ್ನು ಅವರೆಂದೂ ದೂರುವುದಿಲ್ಲ. ಎರಡೂ ದೇಶಗಳು ಅದರಿಂದ ಸಮಸ್ಯೆ ಎದುರಿಸಿ ಎಂಬುದು ಅವರ ಅಂಬೋಣ.
ಪಾಕಿಸ್ಥಾನದಲ್ಲಿನ ತನ್ನ ಪೂರ್ವಿಕರ ಮನೆಗೆ ಮತ್ತೊಮ್ಮೆ ಹೋಗಿ ಬರಬೇಕು ಎಂಬುದು ಅವರ ಬಹುದಿನಗಳ ಆಸೆ. 91 ವರ್ಷದ ತನಕ ಅದು ಸಾಧ್ಯವಾಗಿರಲಿಲ್ಲ. ಪಾಕ್ ಅನುಮತಿ ಪಡೆಯುವುದು ಕಷ್ಟಸಾಧ್ಯವಾಗಿತ್ತು. ವೀಸಾಗಾಗಿ ನಿರಂತರ ಅರ್ಜಿ ಹಾಕಿ ಸೋತಿದ್ದರು.
ಆದರೀಗ ಸ್ವತಃ ಪಾಕಿಸ್ಥಾನ ಮುಂದೆ ಬಂದು ಖನ್ನಾ ಅವರ ಆಸೆ ನೆರವೇರಿಸಲು ಸಹಕರಿಸಿದೆ. ಮೂವರೊಂದಿಗೆ ಖನ್ನಾ ಅವರು ಪಾಕ್ಗೆ ಬಂದು ತಮ್ಮ ಪೂರ್ವಿಕರಿದ್ದ ಉಧೋಕೆಗೆ ಭೇಟಿ ಕೊಡಲು ಅನುಮತಿ ನೀಡಿದೆ.
ಹೀಗಾಗಿ ಖನ್ನಾ ಅವರು ತನ್ನ 81 ವರ್ಷ ಸಹೋದರನೊಂದಿಗೆ ಶೀಘ್ರದಲ್ಲೇ ಪಾಕಿಸ್ಥಾನಕ್ಕೆ ಭೇಟಿಕೊಡಲಿದ್ದಾರೆ.
ನಾವು ನಮ್ಮ ಹೃದಯಾಂತರಾಳದಿಂದ ಹಿರಿಯ ಜೀವ ಖನ್ನಾರಿಗೆ ವೀಸಾ ನೀಡಿದ್ದೇವೆ ಎಂದು ಪಾಕಿಸ್ಥಾನ ಹೈಕಮಿಷನ್ ಹೇಳಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.