ರಾಜ್ಕೋಟ್: ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆ ಮಾಡುವ ಪ್ರಯತ್ನದೊಂದಿಗೆ, ನವೀಕರಿಸಬಹುದಾದ ಶಕ್ತಿ ಮತ್ತು ಇಂಧನ ದಕ್ಷತೆಯನ್ನು ಗಮನದಲ್ಲಿರಿಸಿ ನಗರಗಳ ಕಾರ್ಯತಂತ್ರಗಳಿಗೆ ಅನುಗುಣವಾಗಿ ಡಬ್ಲ್ಯೂಡಬ್ಲ್ಯೂಎಫ್ ಜಾಗತಿಕ ಅರ್ಥ್ ಅವರ್ ಸಿಟಿ ಚ್ಯಾಲೆಂಜ್ ಸ್ಪರ್ಧೆಯಲ್ಲಿ ರಾಜ್ಕೋಟ್ನ್ನು ನ್ಯಾಶನಲ್ ಅರ್ಥ್ ಅವರ್ ಕ್ಯಾಪಿಟಲ್ 2016 ಎಂದು ಘೋಷಿಸಲಾಗಿದೆ.
ಸುಮಾರು 21 ದೇಶಗಳ 125 ನಗರಗಳು ಈ ವರ್ಷದ ಅರ್ಥ್ ಅವರ್ ಸಿಟಿ ಚ್ಯಾಲೆಂಜ್ನಲ್ಲಿ ಭಾಗವಹಿಸಿದ್ದು, ವಾತಾವರಣ ಬದಲಾವಣೆ ಎದುರಿಸುವ ಪ್ರಯತ್ನಗಳಿಗಾಗಿ ಗೌರವಿಸುವ ವರ್ಷಪೂರ್ಣ ನಡೆಯುವ ಸ್ಪರ್ಧೆ ಇದಾಗಿದೆ. 125 ನಗರಗಳ ಪೈಕಿ ಭಾರತದ 11 ನಗರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪುಣೆ, ಕೊಯಂಬತ್ತೂರು ಹಾಗೂ ರಾಜ್ಕೋಟ್ ಫೈನಲ್ಗೆ ಅರ್ಹತೆ ಹೊಂದಿದ್ದವು.
ಈ ಹಿಂದೆ ಥಾಣೆ, ಕೊಯಂಬತ್ತೂರು ಹಾಗೂ ನವದೆಹಲಿ ಈ ಅರ್ಹತೆ ಪಡೆದಿದ್ದವು.
17 ಸದಸ್ಯರ ತಜ್ಞ ತೀರ್ಪುಗಾರರು ಪ್ರತೀ ರಾಷ್ಟ್ರದಿಂದ ಒಂದು ನಗರವನ್ನು ನ್ಯಾಶನಲ್ ಅರ್ಥ್ ಅವರ್ ಕ್ಯಾಪಿಟಲ್ ಹಾಗೂ ಗ್ಲೋಬಲ್ ಅರ್ಥ್ ಅವರ್ ಕ್ಯಾಪಿಟಲ್ ಆಗಿ ಆಯ್ಕೆ ಮಾಡುತ್ತಾರೆ. ಅಂತಿಮವಾಗಿ ರಾಜ್ಕೋಟ್ನ್ನು ನ್ಯಾಶನಲ್ ಅರ್ಥ್ ಅವರ್ ಕ್ಯಾಪಿಟಲ್ 2016 ಎಂದು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.