ನವದೆಹಲಿ: ಈಗ ಇ-ಕಾಮರ್ಸ್ ಮೂಲಕ ಕೂತಲ್ಲಿಂದಲೇ ನಾವು ಬಟ್ಟೆ ಬರೆ, ಆಭರಣ, ಫೋನ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಖರೀದಿಸಬಹುದಾಗಿದೆ. ಆದರೆ ಇನ್ನು ಮುಂದೆ ಹಿಂದೂಗಳ ಪವಿತ್ರ ಜಲ ಗಂಗಾಜಲವನ್ನೂ ನಾವು ಮನೆ ಬಾಗಿಲಲ್ಲೇ ನಿಂತು ಸ್ವೀಕರಿಸಬಹುದಾಗಿದೆ.
ಹೌದು, ಭಾರತೀಯ ಅಂಚೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇನ್ನು ಮುಂದೆ ಮನೆ ಬಾಗಿಲಿಗೆ ಗಂಗಾ ಜಲ ತಲುಪಿಸುವ ಕಾರ್ಯ ಮಾಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು, ’ಪೋಸ್ಟ್ ಮೂಲಕ ನಾವು ಗಂಗಾಜಲ ಪಡೆಯಬಹುದೇ ಎಂದು ಕೋರಿ ಹಲವಾರು ಮನವಿಗಳು ನಮಗೆ ಬರುತ್ತಿವೆ, ಹೀಗಾಗಿ ನಾನು ಇ-ಕಾಮರ್ಸ್ ವೇದಿಕೆಯನ್ನು ಬಳಸಿ ಹರಿದ್ವಾರ ಮತ್ತು ರಿಷಿಕೇಶದಿಂದ ಪವಿತ್ರ ಗಂಗಾಜಲವನ್ನು ತಲುಪಿಸಲು ಪೋಸ್ಟಲ್ ಇಲಾಖೆಗೆ ಸೂಚಿಸಿದ್ದೇನೆ. ಸಂಸ್ಕೃತಿ ಪರವಾದ ಹೆಜ್ಜೆಗಳನ್ನಿಡುತ್ತೇವೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ’ ಎಂದಿದ್ದಾರೆ.
ಪೋಸ್ಟ್ಮ್ಯಾನ್ ಸೀರೆ, ಆಭರಣ ಮನೆಗೆ ತಲುಪಿಸುತ್ತಾನೆ ಎಂದಾದರೆ ಗಂಗಾಜಲ ಯಾಕೆ ತಲುಪಿಸಬಾರದು? ಎಂದು ಅವರು ಪ್ರಶ್ನಿಸಿದ್ದಾರೆ. ಇದು ಇ-ಕಾಮರ್ಸ್ ಇಂಡಸ್ಟ್ರಿಯ ಉನ್ನತಿಗೆ ಸಹಕಾರ ನೀಡಲಿದೆ ಎಂದಿದ್ದಾರೆ.
2014-15ರ ಸಾಲಿನಲ್ಲಿ ಭಾರತೀಯ ಅಂಚೆಯ ಡೆಲಿವರಿ ಕಲೆಕ್ಷನ್ 500 ಕೋಟಿ ಇತ್ತು, 2015-16ರ ಸಾಲಿಗೆ ಅದು 1,300 ಕೋಟಿ ತಲುಪಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.