ಮುಂಬಯಿ: ಬರಪೀಡಿತ ಲಾಥೂರ್ಗೆ ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಯ ನೀರು ಪೂರೈಕೆ ಯೋಜನೆ ಇಂದಿಗೆ (ಮೇ 30) 50 ದಿನಗಳು ಪೂರ್ಣಗೊಂಡಿದೆ. ಮೀರಜ್ನಿಂದ ಲಾಥೂರ್ಗೆ 10 ಟ್ಯಾಂಕ್ಗಳುಳ್ಳ ’ಜಲದೂತ್’ ಮೂಲಕ 5 ಲಕ್ಷ ಲೀಟರ್ ನೀರನ್ನು ಮೊದಲ ರೈಲು ಎ.11 ರಂದು ಪ್ರಯಾಣಿಸಿತ್ತು. ಬಳಿಕ ರಾಜಸ್ಥಾನದ ಕೋಟಾದಿಂದ ಲಾಥೂರ್ಗೆ 50 ಟ್ಯಾಂಕ್ನ ರೈಲಿನಲ್ಲಿ 25 ಲಕ್ಷ ಲೀ. ನೀರನ್ನು ಎ.19 ರಂದು ಪೂರೈಕೆ ಮಾಡಲಾಗಿತ್ತು.
ಮೀರಜ್ನಿಂದ ಸೋಲಾಪುರದ ಲಾಥೂರ್ಗೆ ಮೇ 29 ರ ವರೆಗೆ 45 ಬಾರಿ ಅಂದರೆ ಒಟ್ಟು 945 ಲಕ್ಷ ಲೀ. ನೀರನ್ನು ಸಾಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣಾ ನದಿ ನೀರಿನ ಮಟ್ಟ ಕುಸಿತದಿಂದ ಮೇ 21 ರಿಂದ 25 ರ ವರೆಗೆ ನೀರು ಪೂರೈಕೆ ಮಾಡಲಾಗಿಲ್ಲ. ಸಮೀಪದ ಅಣೆಕಟ್ಟಿನಿಂದ ಕೃಷ್ಣಾ ನದಿಗೆ 2000 ಕ್ಯೂಸೆಕ್ಸ್ ನೀರು ಬಿಡಲಾಗಿದ್ದು, ಆ ಬಳಿಕ ರೈಲು ಟ್ಯಾಂಕ್ಗಳನ್ನು ಭರ್ತಿ ಮಾಡಿ ರವಾನಿಸಲಾಗಿದೆ ಎಂದು ಪುಣೆ ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಎ.ಕೆ. ತಿವಾರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.