ಮಝಗಾಂವ್: ಇಲ್ಲಿಯ ಮಝಗಾಂವ್ ಡಾಕ್ ಲಿಮಿಟೆಡ್ (ಎಂಡಿಎಲ್)ನಲ್ಲಿ ನೌಕಾಪಡೆ ಕಾರ್ಖಾನೆಯನ್ನು ಉದ್ಘಾಟಿಸಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ದೇಶೀಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
ಜಲಾಂತರ್ಗಾಮಿ ನೌಕೆಗಳ ದೇಶೀಯ ನಿರ್ಮಣದ ಮಟ್ಟ ಗಣನಿಯವಾಗಿ ಏರಬೇಕು. ಭಾರತೀಯ ನೌಕಾಪಡೆಗೆ ಎಂಡಿಎಲ್ ೬ ಸ್ಕಾರ್ಪೀನ್ ವರ್ಗದ ನೌಕೆಗಳನ್ನು ನಿರ್ಮಿಸಲಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ರಕ್ಷಣಾ ವಲಯ ಉದ್ದಿಮೆಗಳು (ಪಿಎಸ್ಯು) ’ರಫ್ತು ಸೆಲ್’ ಮೂಲಕ ಹಡಗುಗಳ ರಫ್ತಿಗೆ ಆದೇಶಗಳನ್ನು ಪಡೆಯಬೇಕು ಎಂದು ಹೇಳಿದ್ದಾರೆ.
ಹೊಸದಾಗಿ ನಿರ್ಮಿಸಿದ ಜಲಾಂತರ್ಗಾಮಿ ನಾಕಾ ಕಾರ್ಖಾನೆ ಕಟ್ಟಡವು ಪೂರ್ವ ವಿನ್ಯಾಸದೊಂದಿಗೆ ರಚಿಸಲಾಗಿದೆ. ಏಕಕಾಲದಲ್ಲಿ ಬಹು ಜಲಾಂತರ್ಗಾಮಿ ನೌಕೆಗಳ ನಿರ್ಮಾಣವನ್ನು ನಿರ್ವಹಿಸುವುದಕ್ಕಾಗಿ ಇದನ್ನು ನಿರ್ಮಿಸಲಾಗಿದೆ.
153 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾರ್ಖಾನೆ ಮಳೆ ನೀರು ಕೊಯ್ಲು, ಒಳಚರಂಡಿ ನೀರು ಸಂಸ್ಕರಣೆ, ಗ್ರೇ ವಾಟರ್ ಸಂಸ್ಕರಣ ಘಟಕ, ಚರಂಡಿಗಳಲ್ಲಿ ಎಣ್ಣೆ ನೀರು ಬೇರ್ಪಡಿಸುವ ಸ್ಥಾವರ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.