ಮುಂಬಯಿ: ಮರಾಠಾ ದೊರೆ ಛತ್ರಪತಿ ಶಿವಾಜಿಯ ೩೦೦ ಅಡಿ ಎತ್ತರದ ಪ್ರತಿಮೆಯನ್ನು ಮುಂಬಯಿಯ ಕರಾವಳಿಯಲ್ಲಿ ನಿರ್ಮಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಯೋಚಿಸುತ್ತಿದ್ದರೆ, ಇನ್ನೊಂದೆಡೆ ಶೀಘ್ರದಲ್ಲೇ ಶಿವಾಜಿ ಮಹಾರಾಜ್ಗೆ ಗೌರವ ಆತಿಥ್ಯ ನೀಡಲು ಮುಂಬಯಿ ನಗರ ಸಿದ್ಧವಾಗಿದೆ.
ಜಾನಪದ ಗಾಯಕ, ಇತಿಹಾಸಕಾರ ಬಾಬಾಸಾಹೇಬ್ ಪುರಂದರೆ ಮಾರ್ಗದರ್ಶನದಲ್ಲಿ ಶಿವಾಜಿಯ 9×5 ಅಳತೆಯ 120 ವರ್ಣಚಿತ್ರಗಳು ಅವರ ಸ್ವರಚಿತ ’ರಾಜಾ ಶಿವ-ಛತ್ರಪತಿ’ ಜೂನ್ 14ರಂದು ಮುಂಬಯಿಯಲ್ಲಿ ನಡೆಯಲಿರುವ’ ಜಹಾಂಗಿರ್ ಆರ್ಟ್ ಗ್ಯಾಲರಿ’ಯಲ್ಲಿಪ್ರದರ್ಶನಗೊಳ್ಳಲಿದೆ.
ಶಿವಾಜಿ ಪಶ್ಚಿಮ ಭಾರತದ ಓರ್ವ ಶ್ರೇಷ್ಠ ರಾಜನಾಗಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿನ ಸಮಾಜದಲ್ಲಿ ಜನರಲ್ಲಿ ಈ ಗುಣಗಳ ಕೊರತೆ ಇದೆ ಎಂದು ಬಾಬಾಸಾಹೇಬ್ ಪುರಂದರೆ ಹೇಳಿದ್ದಾರೆ.
ಶ್ರೀಕಾಂತ್ ಮತ್ತು ಗೌತಮ್ ಚೌಗುಲೆ ಈ ವರ್ಣಚಿತ್ರಗಳ ಕಲಾವಿಧರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.