ನವದೆಹಲಿ: ಭಾರತದಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ಇಟಲಿ ನೌಕಾ ದಳದ ಸಿಬ್ಬಂದಿ ಸಲ್ವಟೋರ್ ಗಿರೋನೆಗೆ ಮಾನವೀಯ ಆಧಾರದಲ್ಲಿ ತವರಿಗೆ ಮರಳಲು ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿದೆ.
ಇಟಲಿ ನೌಕದಳದ ಚೀಫ ಮಾಸ್ಟರ್ ಸರ್ಗೆಂಟ್ ಮಸ್ಸಿಮಿಲಿಯಾನೋ ಲಟ್ಟೋರೆ ಮತ್ತು ಗಿರೋನೆ 2012ರಲ್ಲಿ ಕೇರಳ ಕರಾವಳಿಯಲ್ಲಿ ಇಟಲಿ ತೈಲ ಟ್ಯಾಂಕರ್ನ ಭದ್ರತಾ ಸಿಬ್ಬಂದಿಗಳಾಗಿ ನಿಯೋಜನೆಯಾಗಿದ್ದ ವೇಳೆ ಇಬ್ಬರು ಮೀನುಗಾರರನ್ನು ಕೊಂದು ಹಾಕಿದ ಆರೋಪ ಎದುರಿಸುತ್ತಿದ್ದಾರೆ.
ಇವರಲ್ಲಿ ಸರ್ಗೆಂಟ್ ಆರೋಗ್ಯ ಸಂಬಂಧಿ ಚಿಕಿತ್ಸೆಯ ಹಿನ್ನಲೆಯಲ್ಲಿ ಈಗಾಗಲೇ ಇಟಲಿಗೆ ವಾಪಾಸ್ಸಾಗಿ ಅಲ್ಲೇ ಇದ್ದಾರೆ, ಗಿರೋನೆ ನವದೆಹಲಿಯ ಇಟಲಿ ರಾಯಭಾರ ಕಛೇರಿಯಲ್ಲಿದ್ದಾರೆ. ತನಗೂ ಇಟಲಿಗೆ ಹೋಗಲು ಅವಕಾಶ ನೀಡಬೇಕು ಎಂದು ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ್ದರು. ಇಟಲಿ ಕೂಡ ಮನವಿ ಮಾಡಿಕೊಂಡಿತ್ತು.
ಇದೀಗ ಮಾನವೀಯ ಆಧಾರದಲ್ಲಿ ಅವರಿಗೆ ಇಟಲಿಗೆ ತೆರಳುವ ಅವಕಾಶವನ್ನು ಸುಪ್ರಿಂಕೋರ್ಟ್ ನ್ಯಾಯಪೀಠ ನೀಡಿದೆ. ಅಲ್ಲದೇ ಅಗತ್ಯ ಬಿದ್ದಾಗ ಅವರನ್ನು ಭಾರತಕ್ಕೆ ನೀಡಬೇಕು ಎಂದು ಷರತ್ತು ವಿಧಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.