ನವದೆಹಲಿ: ಒಂದು ಕಡೆ ಎರಡು ವರ್ಷದ ತನ್ನ ಸಾಧನೆಯನ್ನು ಬಿಂಬಿಸಲು ಎನ್ಡಿಎ ಸರ್ಕಾರ ಬೃಹತ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಆದರೆ ಇನ್ನೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯಲು ಸರಣಿ ಮಾಧ್ಯಮ ಕಾರ್ಯಕ್ರಮಗಳನ್ನು ಆಯೋಜಿಸಿದೆ.
‘ಪ್ರಗತಿ ಕಿ ಥಮ್ ಗಯಿ ಚಾಲ್, ದೋ ಸಾಲ್, ದೇಶ್ ಕ ಹುವಾ ಬುರಾ ಹಾಲ್’ (Pragati Ki Tham Gayi Chaal, Do Saal, Desh Ka Hua Bura Haal) ಎಂಬ ಥೀಮ್ನೊಂದಿಗೆ ಮಾಧ್ಯಮ ಕಾರ್ಯಕ್ರಮವನ್ನು ಕಾಂಗ್ರೆಸ್ ಆಯೋಜನೆ ಮಾಡಿದೆ. ಈ ವೇಳೆ ಅದು ಸರ್ಕಾರದ ಎರಡು ವರ್ಷದ ವೈಫಲ್ಯ, ಚುನಾವಣಾ ಭರವಸೆಗಳನ್ನು ಈಡೇರಿಸದೆ ಇರುವ ಬಗ್ಗೆ ಬುಕ್ಲೆಟ್ ಬಿಡುಗಡೆ ಮಾಡಲಿದೆ.
ದೇಶದ 30 ನಗರಗಳಲ್ಲಿ ಕಾಂಗ್ರೆಸ್ ನಾಯಕರುಗಳು ಪತ್ರಿಕಾಗೋಷ್ಠಿಗಳನ್ನು ನಡೆಸಿ ಕೇಂದ್ರ ವೈಫಲ್ಯಗಳನ್ನು ವಿವರಿಸಲಿದ್ದಾರೆ. ಗುಲಾಮ್ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಆಡಳಿತ ಮತ್ತು ಅಭಿವೃದ್ಧಿ ಈ ಎರಡು ವಿಷಯಗಳು ಮೋದಿ ಸರ್ಕಾರದಿಂದ ನಾಪತ್ತೆಯಾಗಿದೆ. ಸರ್ಕಾರ ಕೇವಲ ಥಿಯರಿ ಮತ್ತು ಆಡಂಬರದಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೋದಿ ಸರ್ಕಾರ ತನ್ನ ಸಾಧನೆ ಬಿಂಬಿಸಲು ಆಯೋಜಿಸಿರುವ ಕಾರ್ಯಕ್ರಮಗಳಿಗೆ ಟಾಂಗ್ ಕೊಡಲು, ಜನರ ಗಮನ ಬೇರೆಡೆ ಸೆಳೆಯಲು ಈ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.