ನವದೆಹಲಿ : ಭಾರತವು 2 ನೌಕಾಪಡೆಯ ಹಡಗುಗಳನ್ನು ತುರ್ತು ಕಾರ್ಯಾಚರಣೆಗಾಗಿ ಶ್ರೀಲಂಕಾಗೆ ಕಳುಹಿಸಿ ಕೊಟ್ಟಿದೆ.
ಸೈಕ್ಲೋನ್ ಇಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ನೌಕಾಪಡೆಯ ಐಎನ್ಎಸ್ ಸಟ್ಲೆಜ್ ಹಾಗೂ ಐಎನ್ಎಸ್ ಸುನೈನಾ ಎಂಬ 2 ಹಡಗುಗಳನ್ನು ಶುಕ್ರವಾರ ಭಾರತದಿಂದ ಶ್ರೀಲಂಕಾಗೆ ಕಳುಹಿಸಲಾಗಿದೆ.
ಸರ್ವೇಕ್ಷಣೆ ಮತ್ತು ಪರಿಹಾರ ಸಾಮಗ್ರಿಗಳನ್ನು ಹೊರುವ ಸಾಮರ್ಥ್ಯ ಹೊಂದಿರುವ ಐಎನ್ಎಸ್ ಸಟ್ಲೇಜ್ ಮತ್ತು ಕಡಲ ತೀರದ ವಿಚಕ್ಷಣಾ ಪಡೆಯನ್ನು ಹೊಂದಿರುವ ಐಎನ್ಎಸ್ ಸುನೈನಾ ಕೊಚ್ಚಿಯ ಸದರನ್ ನೇವಲ್ ಕಮಾಂಡ್ ಇಂದ ಕೊಲಂಬೋ ಕಡೆ ಪ್ರಯಾಣ ಬೆಳೆಸಿದೆ.
ಶ್ರೀಲಂಕಾದಲ್ಲಿ ರೋನು ಸೈಕ್ಲೋನ್ ಆರ್ಭಟಕ್ಕೆ ಅತಿ ಹೆಚ್ಚು ಮಳೆ ಸಂಭವಿಸಿದ್ದು ಭೂಕುಸಿತ ಉಂಟಾಗಿತ್ತು. ಈಗಾಗಲೇ 40 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸುಮಾರು 400,000 ಲಕ್ಷಕ್ಕೂ ಹೆಚ್ಚು ಜನರು ಸೈಕ್ಲೋನ್ ಆರ್ಭಟಕ್ಕೆ ತುತ್ತಾಗಿದ್ದಾರೆ.
ನರೇಂದ್ರ ಮೋದಿಯವರು ಗುರುವಾರದಂದು ಮೃತಪಟ್ಟವರಿಗೆ ಶಾಂತಿಯನ್ನು ಕೋರಿದ್ದು, ಈ ಕಠಿಣ ಪರಿಸ್ಥಿತಿಯಲ್ಲಿ ಶ್ರೀಲಂಕಾದೊಂದಿಗೆ ಭಾರತ ಸರ್ಕಾರವು ಯಾವುದೇ ರೀತಿಯ ಸಹಾಯವನ್ನು ಶ್ರೀಲಂಕಾ ಹಾಗೂ ಅದರ ಜನತೆಗೆ ಮಾಡಲು ಸಿದ್ಧವಿರುತ್ತದೆ. ತುರ್ತು ಸಹಾಯವನ್ನು ನಾವು ನೀಡುತ್ತೇವೆ ಎಂದು ಹೇಳಿದ್ದರು.
ರೋನು ಸೈಕ್ಲೋನ್ ಭೀತಿ ಹೆಚ್ಚುತ್ತಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚು ಮಳೆ ಹಾಗೂ ಪ್ರವಾಹವೂ ಎದುರಾಗುವ ಸಂಭವನೀಯತೆಗಳೂ ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.