ನವದೆಹಲಿ : ಬಿಜೆಪಿ ಸಂಸದ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲು ಈಶಾನ್ಯ ವಲಯದ ೬ ಕ್ರಿಕೆಟ್ ಮಂಡಳಿಗಳು ನಿಶ್ಚಯಿಸಿದ್ದು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಬೆಂಬಲಿಸಿದೆ ಎನ್ನಲಾಗಿದೆ.
ಈ ಹಿಂದೆ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿದ್ದು, ಪ್ರಸ್ತುತ ಅವರು ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದರು. ಇದೀಗ ಅವರಿಂದ ತೆರವಾದ ಸ್ಥಾನಕ್ಕೆ ಅಧ್ಯಕ್ಷರ ಆಯ್ಕೆ ಮೇ ೨೨ ರಂದು ನಡೆಯಲಿದ್ದು, ಅದಕ್ಕಾಗಿ ಅನುರಾಗ್ ಠಾಕೂರ್ ಹೆಸರು ಕೇಳಿಬರುತ್ತಿದೆ.
ಬಂಗಾಳ, ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಶನ್, ಒರಿಸ್ಸಾ ಕ್ರಿಕೆಟ್ ಅಸೋಸಿಯೇಷನ್, ಕೋಲ್ಕತಾ ರಾಷ್ಟ್ರೀಯ ಕ್ರಿಕೆಟ್ ಕ್ಲಬ್, ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್ ಹಾಗೂ ತ್ರಿಪುರ ಕ್ರಿಕೆಟ್ ಅಸೋಸಿಯೇಶನ್ ಇವುಗಳು ಅನುರಾಗ್ ಠಾಕೂರ್ ಆಯ್ಕೆಯನ್ನು ಬೆಂಬಲಿಸುತ್ತಿದೆ. ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಅಧ್ಯಕ್ಷರಾದರೆ ಇನ್ನಷ್ಟು ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈಶಾನ್ಯ ವಲಯ ಕ್ರಿಕೆಟ್ ಮಂಡಳಿಗಳು ಅವರನ್ನು ಬೆಂಬಲಿಸುತ್ತಿದೆ ಎಂದು ತಿಳಿಸಿವೆ.
ಈ ಬಾರಿ ಅಧ್ಯಕ್ಷರ ನಾಮನಿರ್ದೇಶನ ಮಾಡುವ ಹಕ್ಕು ಈಶಾನ್ಯ ವಲಯ ಕ್ರಿಕೆಟ್ ಮಂಡಳಿಯದಾಗಿದ್ದು, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಕ್ರಿಕೆಟ್ ಮಂಡಳಿಯಿಂದ ಹೆಸರನ್ನು ಸೂಚಿಸಬೇಕಾಗಿದ್ದು ಈಶಾನ್ಯ ವಲಯದ ಎಲ್ಲಾ ಕ್ರಿಕೆಟ್ ಮಂಡಳಿಗಳು ಠಾಕೂರ್ಗೆ ಒಮ್ಮತದಿಂದ ಬೆಂಬಲಿಸಿದೆ.
ಇದೇ ಸಂದರ್ಭ ಅನುರಾಗ್ ಠಾಕೂರ್ ಅವರಿಂದ ತೆರವಾದ ಕಾರ್ಯದರ್ಶಿ ಸ್ಥಾನಕ್ಕೆ ಅಜೇಯ್ ಶಿರ್ಕೆ ಆಯ್ಕೆಯಾಗುವ ಸಾಧ್ಯತೆಗಳಿದ್ದು, ಅವರು ಭಾರತ ಮತ್ತು ಲಂಡನ್ನಲ್ಲಿ ೬ ತಿಂಗಳ ಕಾಲ ನೆಲೆಸುತ್ತಿದ್ದಾರೆ. ಅವರ ಲಭ್ಯತೆ ಬಗ್ಗೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಪ್ರಶ್ನಿಸಿದೆ. ಅಜೇಯ್ ಶಿರ್ಕೆ ಶ್ರೀನಿವಾಸನ್ ಅಧ್ಯಕ್ಷರಾಗಿರುವ ಸಂದರ್ಭ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು.
ಈ ನಡುವೆ ಮೇ.೨೨ ರಂದು ನಡೆಯುವ ಈ ಚುನಾವಣೆಗೆ ತಡೆ ನೀಡುವಂತೆ ಬಿಹಾರ್ ಕ್ರಿಕೇಟ್ ಬೋರ್ಡ್ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಯಾವುದೇ ದೋಶಾರೋಪಗಳನ್ನು ಹೊಂದಿಬರದು ಎಂದಿದೆ. ಆದರೆ ಅನುರಾಗ್ ಠಾಕೂರ್ ವಿರುದ್ಧ ದೇಶಾರೋಪಗಳಿರುವುದರಿಂದ ಇದಕ್ಕೆ ತಡೆನೀಡುವಂತೆ ಅರ್ಜಿ ಸಲ್ಲಿಸಿತ್ತು.ಆದರೆ ಇದನ್ನು ವಿಚಾರಣೆ ನಡೆಸಿದು ಸುಪ್ರೀಂ ಕೋರ್ಟ್ ಚುನಾವಣೆಗೆ ತೆನೇಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಂತಿಮವಾಗಿ ಯಾರು ಅಧ್ಯಕ್ಷರು, ಕಾರ್ಯದರ್ಶಿ ಆಗುತ್ತಾರೆ ಎಂದು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.