ಉಜ್ಜೈನಿ : ಮಧ್ಯಪ್ರದೇಶದ ಸರಕಾರ ಅಂತಿಮವಾಗಿ ಸಾದ್ವಿ ಪ್ರಗ್ಯಾಸಿಂಗ್ ಅವರ ಬೇಡಿಕೆಯನ್ನು ಒಪ್ಪಿಕೊಂಡು ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭ ಮೇಳಕ್ಕೆ ಪೂರ್ಣ ರಕ್ಷಣೆಯೊಂದಿಗೆ ಭೇಟಿ ನೀಡಲು ಅನುಮತಿಯನ್ನು ನೀಡಿದೆ.
ಉಜ್ಜೈನಿ ಕುಂಭ ಮೇಳಕ್ಕೆ ತೆರಳುವ ಮೂಲಕ ಸಾಧ್ವಿ ತನ್ನ ಆಮರಣ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ ಎನ್ನಲಾಗಿದೆ.
ಕೋರ್ಟ್ ಮುಖಾಂತರ ಹೋಗಲು ಅನುಮತಿ ದೊರಕಿದ್ದರೂ, ಮಧ್ಯಪ್ರದೇಶದ ಸರಕಾರ ಸುರಕ್ಷತೆಯ ವಿಷಯದಿಂದ ಸಾಧ್ವಿ ಅವರು ಕುಂಭ ಮೇಳಕ್ಕೆ ತೆರಳುವುದಕ್ಕೆ ಅನುಮತಿಯನ್ನು ನಿರಾಕರಿಸಿತ್ತು. ಇದರಿಂದ ಜೈಲಿನಲ್ಲೇ ಅಮರಣ ಉಪವಾಸವನ್ನು ಸಾದ್ವಿ ಪ್ರಗ್ಯಾ ಸಿಂಗ್ ಕೈಗೊಂಡಿದ್ದರು. ಜೈಲ್ ಅಧೀಕ್ಷರಿಗೆ ಅನುಮತಿ ಕೋರಿ ಈ ಹಿಂದೆಯೇ ಪತ್ರ ಮುಖೇನ ಕೇಳಿಕೊಂಡಿದ್ದರು. ಅದರ ಪ್ರತಿಯನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಗೃಹಸಚಿವರಿಗೆ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ, ಮಾನವ ಅಧಿಕಾರ ಆಯೋಗ ಹಾಗೂ ಮಹಿಳಾ ಆಯೋಗಕ್ಕೂ ಮನವಿ ಪತ್ರವನ್ನು ರವಾನಿಸಿದ್ದರು.
ಪತ್ರದಲ್ಲಿ, ‘ನಾನು ಕ್ಯಾನ್ಸರ್ ಅಂತಹ ಗಂಭೀರ ರೋಗದಿಂದ ಬಳಲುತ್ತಿದ್ದು, ಬಹುಶಃ ಮುಂದಿನ ಕುಂಭ ಮೇಳವನ್ನು ಕಣ್ಣಾರೆ ನೋಡಲು ಸಾಧ್ಯವಾಗಲಾರದು. ನನ್ನ ಅಂತಿಮ ಇಚ್ಛೆ ಎಂದು ತಿಳಿದು ನನಗೆ ಕುಂಭಮೇಳಕ್ಕೆ ಹೋಗಲು ಅನುಮತಿ ನೀಡಿ’ ಎಂದು ಕೋರಿದ್ದರು.
ಸಾದ್ವಿ ಪ್ರಗ್ಯಾ ಸಿಂಗ್ ಗುರುಗಳಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವದೇಶಾನಂದಗಿರಿಜೀ ಮಹಾರಾಜ್ ಅವರಿಂದ ಆಶೀರ್ವಾದ ಪಡೆಯುವ ಅನುಮತಿಯನ್ನೂ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಂಭಮೇಳದಲ್ಲಿ ಇಂದು ಸಾದ್ವಿ ಪ್ರಗ್ಯಾ ಸಿಂಗ್ ಕ್ಷಿಪ್ರ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.