ಮುಂಬಯಿ : ಕಾಂಗ್ರೆಸ್ ಪಕ್ಷವು ಗಾಂಧಿ ಹೆಸರನ್ನು ತಂದೆಯ ಆಸ್ತಿ ಎಂದುಕೊಂಡಿದೆಯೇ ? ಎಲ್ಲೆಡೆ ಗಾಂಧಿ ಹೆಸರನ್ನು ಬಳಸಿಕೊಂಡು ಗಾಂಧಿಮಯ ಮಾಡಿದೆ ಎಂದು ಗಾಂಧಿ ಕುಟುಂಬದವರ ವಿರುದ್ಧ ಬಾಲಿವುಡ್ನ ಹಿರಿಯ ನಟ ರಿಷಿ ಕಪೂರ್ ಟ್ವೀಟ್ಗಳ ಸರಣಿಗೈದಿದ್ದಾರೆ.
ಕಾಂಗ್ರೆಸ್ ಪಕ್ಷವು ಗಾಂಧಿ ಹೆಸರನ್ನಿಟ್ಟುವ ಸರ್ಕಾರದ ಆಸ್ತಿಗಳು, ಸ್ಥಳಗಳು ಇವುಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಬದಲಿಸಬೇಕು.
ನಮ್ಮ ದೇಶದ ಪ್ರಮುಖ ಸ್ಥಳಗಳಿಗೆ, ಆಸ್ತಿಗಳಿಗೆ ಹೆಸರಿಡುವಾಗ ಸಮಾಜಕ್ಕೆ ಕೊಡುಗೆ ನೀಡಿದವರ ಹೆಸರನ್ನಿಡಬೇಕು. ಪ್ರತಿಯೊಂದಕ್ಕೂ ಗಾಂಧಿ ಹೆಸರನ್ನಿಡುವ ಅಗತ್ಯವೇನಿದೆ ? ನಾನಂತೂ ಇದನ್ನು ಒಪ್ಪುವುದಿಲ್ಲ. ಜನರೂ ಕೂಡಾ ಈ ಕುರಿತು ಯೋಚಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ವಿಶೇಷವಾಗಿ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ವಿರುದ್ಧ ಟ್ವೀಟ್ ಮಾಡಿರುವ ರಿಷಿ ಕಪೂರ್, ಚಂಡೀಗಢದಲ್ಲಿ ರಾಜೀವ್ ಗಾಂಧಿಯವರ ಆಸ್ತಿ ಇದೆಯಾ ? ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದಿರಾ ಗಾಂಧಿ ಹೆಸರೇಕೆ ? ಮಹಾತ್ಮಾಗಾಂಧಿ, ಭಗತ್ ಸಿಂಗ್, ಅಂಬೇಡ್ಕರ್ ಅಥವಾ ನನ್ನ ಹೆಸರನ್ನೇ ಇಡಬಹುದಿತ್ತು. ಅಲ್ಲವೇ ? ಎಂದಿದ್ದಾರೆ.
ದೆಹಲಿಯ ರಸ್ತೆಗಳ ಹೆಸರುಗಳನ್ನು ಬದಲಿಸುವುದಾದರೆ ಗಾಂಧಿಯವರ ಹೆಸರಿನಲ್ಲಿರುವ ಸರ್ಕಾರದ ಸ್ಥಳ, ಸ್ವತ್ತುಗಳನ್ನು ಏಕೆ ಬದಲಿಸಲಾಗುವುದಿಲ್ಲ ? ಬಾಂದ್ರಾ, ವರ್ಲಿ ಸೀ ಲಿಂಕ್ ಅನ್ನು ಲತಾ ಮಂಗೇಶ್ಕರ್ ಅಥವಾ ಜೆಆರ್ಡಿ ಟಾಟಾ ಲಿಂಕ್ ರೋಡ್ ಎಂದು ಬದಲಾಯಿಸಿ. ಫಿಲ್ಮ್ ಸಿಟಿ ಹೆಸರು ಬದಲಾವಣೆ ಕುರಿತು ಟ್ವೀಟ್ ಮಾಡಿರುವ ರಿಷಿ ಕಪೂರ್ ದಿಲೀಪ್ ಕುಮಾರ್, ಅಮಿತಾಬ್ ಬಚ್ಚನ್, ದೇವಾನಂದ್, ಅಶೋಕ್ ಕುಮಾರ್ ಇನ್ನಿತರರ ಹೆಸರಿಡುವು ಎಷ್ಟು ಸೂಕ್ತ ಅಲ್ಲವೇ ಎಂದಿದ್ದಾರೆ.
ಮೊಹಮ್ಮದ್ ರಫಿ, ಮನ್ನಾ ಡೇ, ಕಿಶೋರ್ ಕುಮಾರ್, ಮುಖೇಶ್ ಮೊದಲಾದವರ ಹೆಸರುಗಳನ್ನು ದೇಶದೆಲ್ಲೆಡೆ ಇಡಬಹುದು. ರಾಜ್ ಕಪೂರ್ ಅವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಜಕಾರಣದಲ್ಲಿದ್ದವರೂ ಅಷ್ಟೊಂದು ಕೀರ್ತಿ ಗಳಿಸಲು ಅಸಾಧ್ಯವಾದುದನ್ನು ಅವರು ಚಿತ್ರರಂಗದಲ್ಲಿದ್ದು ಗಳಿಸಿದ್ದಾರೆ ಎಂದಿದ್ದಾರೆ.
ಒಟ್ಟಿನಲ್ಲಿ ಗಾಂಧಿ ಕುಟುಂಬದ ವಿರುದ್ಧವಾಗಿ ಸರಣಿ ಟ್ವೀಟ್ ಮಾಡಿರುವ ರಿಷಿ ಕಪೂರ್ ಎಲ್ಲರನ್ನೂ ‘ಇದೇನಪ್ಪಾ ಹಿಂಗೆ’ ಎನ್ನುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.