ನವದೆಹಲಿ: ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತಿ ಹೊಂದಿರುವ ಸದಸ್ಯರ ಅಧಿಕಾರಾವಧಿಯಲ್ಲೇ ಸರಕು ಮತ್ತು ಸೇವಾ ತೆರಿಗೆಗಳ ಅನುಮೋದನೆ ಸಿಕ್ಕಿದ್ದರೆ ರಾಜ್ಯಗಳಿಗೆ ಲಾಭದಾಯಕವಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ರಾಜ್ಯಸಭೆಯಿಂದ ನಿವೃತ್ತರಾದ 53 ಸದಸ್ಯರಿಗೆ ಶುಭಾಶಯ ಕೋರಿ ಅವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯಸಭಾ ಸದಸ್ಯರು ರಾಜ್ಯಗಳ ಪ್ರತಿನಿಧಿಗಳಾಗಿದ್ದು, ತಮ್ಮ ರಾಜ್ಯಗಳ ಹಿತಾಸಕ್ತಿ ಬಯಸುವುದು ಮುಖ್ಯವಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ತೆರಿಗೆ ಮಸೂದೆ, ಅರಣ್ಯ ನಿಧಿ ನಿರ್ವಹಣೆ ಮಸೂದೆ ರಾಜ್ಯ ಸಭೆಯಲ್ಲಿ ಅನುಮೋದನೆ ಪಡೆಯಲು ಎನ್ ಡಿ ಎ ಹರಸಾಹಸ ಪಡುತ್ತಿದೆ.
ಸರಕು ಮತ್ತು ತೆರಿಗೆ ಮಸೂದೆಗೆ ಲೋಕಸಭೆಯಲ್ಲಿ ಒಪ್ಪಿಗೆ ದೊರೆತರೂ ರಾಜ್ಯಸಭೆಯಲ್ಲಿ ಬಹುಮತವಿಲ್ಲದೇ ಬಾಕಿ ಉಳಿದಿದೆ. ಅರಣ್ಯ ನಿಧಿ ನಿರ್ವಹಣೆ ಮಸೂದೆ ಜಾರಿಗೆ ಬರುತ್ತಿದ್ದರೆ ಮುಂಗಾರಿನ ಒಳಗಾಗಿ ಪ್ರತಿ ರಾಜ್ಯಗಳಿಗೆ 2-3 ಕೋಟಿ ರೂಪಾಯಿಯಂತೆ ಒಟ್ಟು 42 ಸಾವಿರ ಕೋಟಿ ಅನುದಾನ ಸಿಗುತ್ತಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.