ನವದೆಹಲಿ : ದೇಶವಿರೋಧಿ ಘೋಷಣೆ ಕೂಗಿದ್ದ ಕನ್ಹಯ್ಯ ಕುಮಾರ್ ಪ್ರಕರಣದ ಲಾಭ ಪಡೆದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕರ ನಿಯೋಜನೆಗೆ ಇಸಿಸ್ ನ ಅಹ್ಮದ್ ಅಲಿ ತನ್ನ ಸಹಚರರಿಗೆ ತಿಳಿಸಿದ್ದ ಎಂದು ಮೂಲಗಳು ತಿಳಿಸಿವೆ..
ರಾಷ್ಟ್ರೀಯತೆ ವಿಚಾರದಲ್ಲಿ ಜೆ.ಎನ್.ಯು ವಿವಿಯಲ್ಲಿ ಭುಗಿಲೆದ್ದ ಕನ್ಹಯ್ಯ ಕುಮಾರ್ ವಿವಾದ ಬಳಸಿ ಐಎಸ್ಐಎಸ್ ಬೆಳೆಸುವಂತೆ ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸುವಂತೆ ಐಎಸ್ಐಎಸ್ನ ಅಹ್ಮದ್ ಅಲಿ ಎಂಬಾತ ಆಶಿಕ್ ಅಹ್ಮದ್ ಅಲಿಯಾಸ್ ಪಶ್ಚಿಮ ಬಂಗಾಳದ ಹೂಗ್ಲಿಯ ರಾಜಾ ಎಂಬುವವನಿಗೆ ಹೇಳಿದ್ದ ಎಂದು ತಿಳಿದು ಬಂದಿದೆ.
ಭಾರತದ ಎಲ್ಲಾ ಫಟನೆಗಳ ಬಗ್ಗೆ ಇಸಿಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿದು ಬಂದಿದ್ದು, ವಿದ್ಯಾರ್ಥಿಗಳ ಹೋರಾಟವನ್ನು ಬಳಸಿಕೊಂಡು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ ಎಂದು ಎನ್ಐಎ ಉಗ್ರರ ತನಿಖೆ ಸಂದರ್ಭ ತಿಳಿದು ಬಂದಿದೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.
ಪ್ರತ್ಯೇಕತೆ ಕೂಗು ಹೆಚ್ಚಾದರೆ ರಾಷ್ಟ್ರದಲ್ಲಿ ಭಯೋತ್ಪಾದಕ ಕೃತ್ಯಗಳು ಸುಲಲಿತವಾಗಿ ನಡೆಸಲು ಸಹಾಯಕವಾಗುತ್ತದೆ. ಪ್ರತ್ಯೇಕತೆಯ ಹೋರಾಟ ದೇಶದ ವಿನಾಶಕ್ಕೆ ನಾಂದಿಯಾಗದಿರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.