ರಾಂಚಿ: Direct2Farm ಮೊಬೈಲ್ SMS ಸೇವೆ ದೇಶದಾದ್ಯಂತ ಸಾವಿರಾರು ರೈತರಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ. ಈ ಮೂಲಕ ರೈತರಿಗೆ ಬೆಳೆಯ ಇಳುವರಿಯನ್ನು ಹೆಚ್ಚಿಸಲು, ನೀರು ಪೋಲಾಗುವುದನ್ನು ತಡೆಯಲು ಮತ್ತು ಉತ್ತಮವಾಗಿ ಬೆಳೆ ಬೆಳೆದು ಜೀವನ ಸಾಗಿಸಲು ಸಹಾಯ ಮಾಡುತ್ತಿದೆ.
ಕೀಟ ಸಮಸ್ಯೆಗಳ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಕೆಬಿ ಅಡಿಯಲ್ಲಿ 2006 ರಲ್ಲಿ Direct2Farm ಆರಂಭಗೊಂಡಿತ್ತು. ಇದೀಗ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, Direct2Farm ತನ್ನ ಸಂಶೋಧನೆಗಳ ಲಾಭವನ್ನು ಎಲ್ಲಾ ರೈತರು ಪಡೆಯುವಂತೆ ಮಾಡಲು ಬಯಸಿತ್ತು.
Direct2Farm ವೈಜ್ಞಾನಿಕ ಭಾಷೆಯನ್ನು ರೈತ ಸ್ನೇಹಿ ಭಾಷೆಯಲ್ಲಿ ಪರಿವರ್ತಿಸಬಲ್ಲ ವೃತ್ತಿಪರರ ತಂಡವನ್ನು ನಿಯೋಜಿಸಿದೆ.
Direct2Farm ವಾರದಲ್ಲಿ ಎರಡು ಬಾರಿ ಬೆಳೆ ಸಂಬಂಧಿ ಹಾಗೂ ಪ್ರಾಣಿ ಸಾಕಾಣಿಕೆ ಸಂಬಂಧಿ ಮೊಬೈಲ್ ಸಂದೇಶಗಳನ್ನು ಕಳುಹಿಸುತ್ತದೆ. ಅಲ್ಲದೇ ಹವಾಮಾನ ಬದಲಾವಣೆಯ ತುರ್ತು ಘೋಷಣೆ ಸಂದರ್ಭ ಹೆಚ್ಚುವರಿ ಸಂದೇಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಲಾಗುತ್ತದೆ.
ತನ್ನ ಸೇವೆಯನ್ನು ಹೆಚ್ಚು ರೈತ ಸ್ನೇಹಿ ಮಾಡಲು Direct2Farm ಸ್ಥಳೀಯ ಹಾಗೂ ಇತರ ಭಾಷೆಗಳಲ್ಲೂ ಧ್ವನಿ ಸಂದೇಶಗಳನ್ನು ಕಳುಹಿಸುತ್ತವೆ.
Direct2Farm ರೈತರಿಗೆ ಇಳುವರಿ ಹೆಚ್ಚಿಸಲು, ಮತ್ತು ತೋಟಗಾರಿಕಾ ಉತ್ಪಾದನೆ ಹೆಚ್ಚಿಸುವ ಪರಿಹಾರ ಮಾಹಿತಿಗಳನ್ನು ಒದಗಿಸುತ್ತದೆ. ಅಲ್ಲದೇ ವಿವಿಧ ಬೀಜಗಳು, ಬೀಜ ಬಿತ್ತನೆ ಪದ್ಧತಿ, ರಸಗೊಬ್ಬರಗಳು, ಮಳೆ ಮುನ್ಸೂಚನೆ ಮುಂತಾದ ವಿಚಾರಗಳ ಮಾಹಿತಿಯನ್ನು ಧ್ವನಿ ಸಂದೇಶದ ಮೂಲಕ ನೀಡಲಾಗುತ್ತದೆ. ರೈತರು ತಾವು ಸಂದೇಶ ಪಡೆಯಲು ಬಯಸುವ ನಿರ್ದಿಷ್ಟ ವಿಭಾಗವನ್ನು ಕೂಡ ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಇನ್ನು ಕೃಷಿಯೇತರ ವಿಚಾರಗಳಾದ ರಕ್ತದಾನ, ಧೂಮಪಾನ ವಿರೋಧಿ ಪ್ರಚಾರ, ಹೆಣ್ಣು ಮಕ್ಕಳ ಶಿಕ್ಷಣ, ಯೋಗ ಮುಂತಾದ ವಿಚಾರಗಳ ಬಗ್ಗೆ 3,00,000 ಬಳಕೆದಾರರಿಗೆ ಸಂದೇಶ ಕಳುಹಿಸುತ್ತಿದೆ.
ರೈತರು ಸಂದೇಶವನ್ನು ಕೇಳಲು ಮರೆತಲ್ಲಿ Direct2Farm ಒದಗಿಸಿದ ಟೋಲ್ ಫ್ರೀ ಸಂಖ್ಯೆಗೆ ಕರೆ ನೀಡಿದಲ್ಲಿ ಆ ತಿಂಗಳಿನಲ್ಲಿ ಕಳುಹಿಸಲಾದ ಎಲ್ಲಾ 8 ಸಂದೇಶಗಳನ್ನು ಕೇಳಬಹುದು.
Direct2Farm ದೇಶದ 6 ರಾಜ್ಯಗಳಾದ ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಉತ್ತರಪ್ರದೇಶದ 4,00,000 ರೈತರನ್ನು ತಲುಪಿದೆ.
ಒಬ್ಬ ರೈತನಿಗೆ ವಾರದಲ್ಲಿ 2 ಸಂದೇಶಗಳನ್ನು ನೀಡುವ ಮೂಲಕ ಸುಮಾರು 4 ಲಕ್ಷ ರೈತರನ್ನು ತಲುಪಿರುವ ಈ ಯೋಜನೆ ಭಾರತದ ಡಿಜಿಲಟೈಶೇಷನ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.