ಉಜ್ಜಯನಿ : ನಮ್ಮ ಸಂಸ್ಕೃತಿಯ ಮಜಲುಗಳು ಸಾವಿರಾರು ವರ್ಷದಷ್ಟು ಹಳೆಯದಾಗಿದ್ದು ಮಾನವ ಜೀವನ ಹುಟ್ಟಿದ ಸಂದರ್ಭದ್ದು, ಕುಂಭ ಮೇಳ ಪ್ರಯಾಗದಲ್ಲಿ 12 ವರ್ಷಗಳಿಗೊಮ್ಮೆ ನಡೆಯತ್ತಿತ್ತು. ಅಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಹಲವು ವಿಷಯಗಳಲ್ಲಿ ಚಿಂತನೆ ನಡೆಯುತ್ತಿತ್ತು.
ನಾಸಿಕ್ ಮತ್ತು ಇತರೆಡೆಗಳಲ್ಲಿ 3 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಸಿ ತಾವು ಮಾಡಿದ ಚಿಂತನೆಗಳ ಕಾರ್ಯ, ಅವುಗಳ ಪರಿಣಾಮಗಳನ್ನು ಚರ್ಚಿಸಲಾಗುತ್ತಿತ್ತು. ಆದರೆ ದಿನಕಳೆದಂತೆ ಪದ್ಧತಿ ಉಳಿದು ಚಿಂತನೆ ದೂರವಾದವು. ಈಗ ಪುನರಪಿ ಅಂತಹ ಚಿಂತನೆ ಈ ಕುಂಭಮೇಳದಲ್ಲಿ ನಡೆಯುತ್ತಿದೆ.
ಉತ್ತಮ ವಿಚಾರಗಳನ್ನು ಚರ್ಚಿಸುವ ಅಗತ್ಯತೆ ಇಂದು ಆಗಬೇಕಾಗಿದೆ. ಸಾಮಾಜಿಕ ವಿಚಾರಗಳ ವೈಚಾರಿಕ ಕುಂಭ ನಡೆಸಬೇಕು ಎಂದು ಮೋದಿ ಸಾಧು-ಸಂತರಲ್ಲಿ ಮನವಿ ಮಾಡಿದರು.
ಇಂದು ಉಜ್ಜಯನಿಯಲ್ಲಿ ಸಿಂಹಸ್ಥ ಕುಂಭಮೇಳದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ‘ಭಾರತ ಸಂಸ್ಕಾರ ಮತ್ತು ಹೃದಯ ವೈಶಾಲ್ಯತೆಯನ್ನು ಹೊಂದಿದೆ. ನಾವು ಅದನ್ನು ಜಾಗೃತಗೊಳಿಸಲು ಪ್ರಯತ್ನ ಪಡಬೇಕು. ಇದಕ್ಕೆ ನಾನು ತಾವು ಗ್ಯಾಸ್ ಸಬ್ಸಿಡಿ ಬಿಡಲು ಹೇಳಿದಾಗ 1 ಕೋಟಿ ಪರಿವಾರಗಳು ಇದನ್ನು ಬಿಟ್ಟಿದ್ದವು. ಭಾರತ ಪ್ರಪಂಚದ ಎಲ್ಲಾ ಒಳ್ಳೆಯ ಸಂಗತಿಗಳನ್ನು ಸ್ವೀಕರಿಸಲು ಸದಾ ಸನ್ನದ್ಧವಾಗಿದೆ. ಪ್ರಪಂಚದಲ್ಲಿ ಸಾಮಾಜಿಕ ಸಾಮರಸ್ಯದ ಬಗ್ಗೆ ಈಗ ಚಿಂತನೆ ನಡೆಸುತ್ತಿದ್ದರೆ, ಅದು ನಮಗೆ ಪರಂಪರಾಗತವಾಗಿ ಪ್ರಾಪ್ತವಾಗಿದೆ.’
ಸಾಮಾಜಿಕ ಮೌಲ್ಯಗಳ ಅಗತ್ಯತೆ ಬಗ್ಗೆ ಚರ್ಚೆ ಈ ಕುಂಭಮೇಳದಲ್ಲಿ ನಡೆದಿದೆ. ಕೆಲವೊಮ್ಮೆ ಕೆಲವೊಂದು ವಿಷಯಗಳಲ್ಲಿ ಉತ್ತರ ನೀಡಲಾಗದಿದ್ದಾಗ ಪರಂಪರೆ ಎಂದು ದೂಷಿಸಲಾಗುತ್ತಿದೆ. ಆದರೆ ಈಗ ಅದನ್ನು ಹಾಗೆ ಹೇಳಲು ಸಾಧ್ಯವಿಲ್ಲ ಈ ಬಗ್ಗೆ ಜನರು ಹುಡುಕಾಟ ನಡೆಸಿ ಚರ್ಚಿಸುತ್ತಾರೆ. ಪ್ರಪಂಚಕ್ಕೆ ವಿಸ್ತರಣಾವಾದದ ಚಿಂತನೆಯನ್ನು ಬಿಟ್ಟು ಸಾಮಾಜಿಕ ಮೌಲ್ಯಗಳ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಜಗತ್ತಿನಲ್ಲಿ ನಮ್ಮನ್ನು ಸಂಘಟಿತರಾಗಿಲ್ಲ ಎಂದು ಹೇಳಲಾಗುತ್ತದೆ. ಎಲ್ಲರೂ ಒಟ್ಟಾಗಿ 21 ನೇ ಶತಮಾನದಲ್ಲಿ ಭಾರತವನ್ನು ವಿಶ್ವಗುರು ಮಾಡಬೇಕಾಗಿದೆ.
ಈ ಕುಂಭ ಮೇಳದ ಆಮಂತ್ರಣ ವೈಯಕ್ತಿಕವಾಗಿ ಯಾರಿಗೂ ನೀಡಿರಲಿಲ್ಲ ಆದರೂ ಇಲ್ಲಿ ಎಲ್ಲರೂ ಬಂದು ಸೇರಿದ್ದಾರೆ. ಇಲ್ಲಿ ಯಾವುದೇ ಕೊರತೆಯಿಲ್ಲದೆ ಕುಂಭಮೇಳ ನಡೆಯುತ್ತಿದೆ. ಇದನ್ನು ವಿಶ್ವದ ವಿದ್ಯಾಲಯಗಳು ಅಧ್ಯಯನ ಮತ್ತು ಸಂಶೋಧನೆ ನಡೆಸಲಿ. ಹಾಗೆಯೇ ಭಾರತದ ಚುನಾವಣಾ ನಿರ್ವಹಣೆ ಜಗತ್ತಿಗೆ ಸವಾಲಾಗಿದೆ. ಇದು ಭಾರತೀಯರ ಸಂಘಟನಾ ಕೌಶಲ್ಯಕ್ಕೆ ಉತ್ತಮ ಉದಾಹರಣೆ.
ನಮ್ಮ ದೇಶದ ನದಿಗಳು ಸ್ವಚ್ಛವಾಗಬೇಕು. ಈ ಕಾರ್ಯವನ್ನು ನಾವು ನರ್ಮದಾ ಮತ್ತು ಕ್ಷಿಪ್ರ ನದಿಗಳಿಂದ ಪ್ರಾರಂಭಿಸಲಿದ್ದೇವೆ. ನದಿ ದಂಡೆಯ ಬಳಿ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ಮಾಡಲಿದ್ದೇವೆ.
ಇಲ್ಲಿ ನೆರೆದಿರುವ ಎಲ್ಲಾ ಸಾಧು-ಸಂತರಿಗೂ ನಾನು ಶಿರಸಾ ವಂದಿಸುತ್ತೇನೆ ಎಂದರು. ಎಲ್ಲಾ ಅಖಾಡದ ಸಾಧು ಸಂತರು ವರ್ಷಕ್ಕೆ ಒಂದು ಸಾರಿ ಸಾಪ್ತಾಹಿಕವಾಗಿ ಸಾಮಾಜಿಕ ವಿಚಾರಗಳಲ್ಲಿ ವಿಚಾರಿಕ ಕುಂಭವನ್ನು ನಡೆಸಲು ಮನವಿ ಮಾಡಿದರಲ್ಲದೇ, ಅಲ್ಲಿ ವಿಜ್ಞಾನಿ ತತ್ವಜ್ಞಾನಿಗಳನ್ನೊಳಗೊಂಡಂತೆ ನಾಸ್ತಿಕರನ್ನೂ ಕರೆಸಿ ಸಾಮಾಜಿಕ ಚಿಂತನೆ ನಡೆಸಿದರೆ ಮುಂದಿನ ಕುಂಭ ಮೇಳಗಳಲ್ಲಿ ವೈಚಾರಿಕ ಚಿಂತನೆ ಹೆಚ್ಚಾಗಲಿದ್ದು, ಭಾರತ ವಿಶ್ವಗುರುವಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.