ನವದೆಹಲಿ: ಉಗ್ರ ಸಂಘಟನೆಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ.
ಲಷ್ಕರ್-ಇ-ತೋಯ್ಬಾ, ಇಸಿಸ್ನಂತಹ ದೇಶಕ್ಕೆ ಮಾರಕವಾಗಿ ಪರಿಣಮಿಸಿರುವ ಉಗ್ರ ಸಂಘಟನೆಗಳಲ್ಲಿ ಸ್ಪೈಗಳನ್ನು ನಿಯೋಜಿಸಲು ಕೇಂದ್ರ ಚಿಂತಿಸುತ್ತಿದ್ದು, ಅದಕ್ಕಾಗಿ ಸಂಪುಟದ ಅನುಮೋದನೆ ಪಡೆಯಲು ಮುಂದಾಗಿದೆ.
ಭಯೋತ್ಪಾದಕರ ಚಲನವಲನಗಳ ಬಗ್ಗೆ ಅತ್ಯಗತ್ಯ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ದೇಶದ ಒಳಗೆ ಅಥವಾ ಹೊರಗೆ ಉಗ್ರ ಸಂಘಟನೆಗಳಲ್ಲಿ ತನ್ನ ಅಧಿಕಾರಿಗಳನ್ನು ಸ್ಪೈಗಳಾಗಿ ನಿಯೋಜಿಸುವ ಹಕ್ಕು ರಾಷ್ಟ್ರೀಯ ತನಿಖಾ ದಳಕ್ಕೆ ಇದೆ
ಪ್ರಸ್ತುತ ಭಾರತದ ಗುಪ್ತಚರ ಇಲಾಖೆ ’ರಾ’ ವಿದೇಶದಿಂದ ಭಾರತದ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದೆ. ದೇಶದ ಮೇಲಿನ ದಾಳಿಯನ್ನು ತಡೆಯಲು ರಾ ಮತ್ತು ಇತರ ಭದ್ರತಾ ಏಜೆನ್ಸಿಗಳು ಭಯೋತ್ಪಾದಕರ ಕಾರ್ಯಾಚರಣೆಯ ಬಗ್ಗೆ ಅಲರ್ಟ್ ಆಗಿರಬೇಕಾದುದು ಅತ್ಯಗತ್ಯ.
ವರದಿಗಳ ಪ್ರಕಾರ ಗೃಹಸಚಿವಾಲಯ ರಾಷ್ಟ್ರೀಯ ತನಿಖಾ ದಳಕ್ಕೆ ಈ ನಿಟ್ಟಿನಲ್ಲಿ ಹೆಚ್ಚಿನ ಅಧಿಕಾರ ನೀಡಲು ಬಯಸಿದ್ದು, ಅದಕ್ಕಾಗಿ ಸಚಿವ ಸಂಪುಟದ ಸಲಹೆಯನ್ನು ಪಡೆಯಲಿದೆ. ಸಂಪುಟ ಒಪ್ಪಿಗೆ ನೀಡಿದರೆ ಈ ವಿಷಯ ಸಂಸತ್ತಿನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.