ಉಜೈನಿ; ಮದ್ಯಪ್ರದೇಶದ ಉಜೈನಿಯಲ್ಲಿ ಹಿಂದೂಗಳ ಅತೀದೊಡ್ಡ ಸಮ್ಮೇಳನ ’ಸಿಂಹಸ್ಥ ಕುಂಭಮೇಳ’ದಲ್ಲಿ ನೂರಾರು ಮಂದಿ ಸ್ವಚ್ಛತಾ ಕಾರ್ಮಿಕರು ಹಗಲು ರಾತ್ರಿ ಎನ್ನದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಇವರಲ್ಲಿ ಹೆಚ್ಚಿನವರು ದಲಿತರು.
ಈ ಸ್ವಚ್ಛತಾ ಕಾರ್ಮಿಕರನ್ನು ಕಂಡು ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಶುಕ್ರವಾರ ಉಜೈನಿಯ ಶ್ರೀ ಗುರು ಕರ್ಶನಾಯ್ಕ್ ಆಶ್ರಮದಲ್ಲಿ ಊಟ, ಉಪಹಾರ ಸೇವಿಸಿದರು.
ಆಶ್ರಮದ ಆಡಳಿತ ಮಂಡಳಿ ಒಟ್ಟು 1,200 ಸ್ವಚ್ಛತಾ ಕಾರ್ಮಿಕರನ್ನು ಕರೆದಿತ್ತು. ಈ ವೇಳೆ ಪುರುಷ ಕಾರ್ಮಿಕರಿಗೆ ಶರ್ಟ್ಟ್, ಪಂಚೆಗಳನ್ನು ನೀಡಲಾಯಿತು. ಮಹಿಳೆಯರಿಗೆ 100 ರೂಪಾಯಿ ಮತ್ತು ಸೀರೆಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಭಾಗವತ್ ಅವರು ಬುಡಕಟ್ಟು ಜನಾಂಗದವರೊಂದಿಗೆ ಕ್ಷಿಪ್ರ ನದಿಯಲ್ಲಿ ಪವಿತ್ರ ಸ್ನಾನವನ್ನೂ ಮಾಡಿದರು. ಜನಜಾತಿ ಸಮ್ಮೇಳವನ್ನು ಉದ್ದೇಶಿಸಿಯೂ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.