ಮುಂಬಯಿ: 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ ಶುಕ್ರವಾರ ಮುಂಬಯಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ಎರಡನೇ ಚಾರ್ಜ್ಶೀಟನ್ನು ಸಲ್ಲಿಕೆ ಮಾಡಿದೆ.
ಈ ಸ್ಫೋಟದಲ್ಲಿ 6 ಮಂದಿ ಸತ್ತು, 101 ಮಂದಿ ಗಾಯಗೊಂಡಿದ್ದರು. ಪ್ರಗ್ಯಾ ಸಿಂಗ್ ಠಾಕೂರ್, ಶಿವ್ ಕಲ್ಸ್ಂಗ್ರಾ, ಶ್ಯಾಂ ಸಾಹು, ಪ್ರವೀಣ್ ಟಕ್ಕಲ್ಕಿ, ಲೋಕೇಶ್ ಶರ್ಮಾ, ಧನ್ ಚೌಧುರಿ ಅವರನ್ನು ಆರೋಪಿಗಳು ಎಂದು ಪರಿಗಣಿಸಲಾಗಿತ್ತು.
ಆದರೆ ಈ ಆರು ಮಂದಿಯ ವಿರುದ್ಧ ನಿಖರ ಸಾಕ್ಷಿಗಳಿಲ್ಲ ಎಂದು ರಾಷ್ಟ್ರೀಯ ತನಿಖಾ ತಂಡ ಹೇಳಿದೆ. ಅಲ್ಲದೇ ಪ್ರಕರಣದ ಅಂತಿಮ ವರದಿಯಲ್ಲಿ ಈ ಆರು ಮಂದಿಯ ವಿರುದ್ಧ ಮತ್ತೆ ತನಿಖೆ ನಡೆಸುವುದು ಸರಿಯಾದುದಲ್ಲ ಎಂದು ಹೇಳಿದೆ.
ಹೀಗಾಗಿ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿತರಾಗಿ ಹಲವಾರು ವರ್ಷಗಳಿಂದ ಜೈಲಿನಲ್ಲಿ ದಿನ ದೂಡುತ್ತಿದ್ದ ಸಾದ್ವಿ ಪ್ರಗ್ಯಾ ಸಿಂಗ್ ಮತ್ತು ಇತರರ ಹೆಸರನ್ನು ಇಂದು ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿಲ್ಲ, ಈ ಮೂಲಕ ಅವರಿಗೆ ಪ್ರಕರಣದಲ್ಲಿ ಕ್ಲೀನ್ಚಿಟ್ನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.