ನವದೆಹಲಿ: ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶದ ಮೊದಲ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿ (ಐಪಿಆರ್) ಶುಕ್ರವಾರ ಘೋಷಿಸಲಿದ್ದಾರೆ ಎಂದು ಸಚಿವ ಸಂಪುಟ ಸ್ಪಷ್ಟಪಡಿಸಿದೆ.
ಈ ನೀತಿಯು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಜಾಗೃತಿ ಮೂಡಿಸುವುದು, ಪರಿಣಾಮಕಾರಿ ಐಪಿಆರ್ ಜಾಗೊಳಿಸುವುದು, ಐಪಿಆರ್ ವಾಣಿಜ್ಯೀಕರಣದ ಮೇಲೆ ವಿಶೇಷ ಒತ್ತು ನೀಡುವ ಬಗ್ಗೆ ಗಮನ ಹರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನೀತಿ ಶಾಲಾ ಕಾಲೇಜು ಮಟ್ಟದಲ್ಲಿ ಐಪಿಆರ್ ಜಾಗೃತಿ ಮೂಡಿಸುವುದು, ಪಠ್ಯಕ್ರಮದಲ್ಲಿ ಐಪಿಆರ್ ಅಳವಡಿಸುವುದು, ರಾಷ್ಟ್ರೀಯ ಸಂಶೋಧನಾ ನಿಗಮ ಮುಂತಾದ ಸಂಸ್ಥೆಗಳಿಗೆ ಪ್ರಚಾರ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.
ಈ ನೀತಿ ಐಟಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ತೆರಿಗೆಯ ಲಾಭ ಮತ್ತು ಶುಲ್ಕ ಮನ್ನಾವನ್ನು ಉತ್ತೇಜಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.