ನವದೆಹಲಿ: ರಾಜ್ಯಸಭೆಯ ’ನಂಬರ್ ಗೇಮ್’ ಶುಕ್ರವಾರದಿಂದ ಬದಲಾಗಲಿದೆ. ಕಾರಣ ಇಂದು ಒಂದೇ ದಿನ ಒಟ್ಟು 53 ಸದಸ್ಯರು ಮೇಲ್ಮನೆಯಿಂದ ನಿವೃತ್ತರಾಗಲಿದ್ದಾರೆ.
53 ಮಂದಿಯಲ್ಲಿ ಕಾಂಗ್ರೆಸ್ನ 16 ಸದಸ್ಯರು ನಿವೃತ್ತರಾಗಲಿದ್ದಾರೆ. ರಾಜ್ಯಸಭೆಯಲ್ಲಿ ಒಟ್ಟು 65 ಸದಸ್ಯ ಬಲವನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ನಿವೃತ್ತರಾದ ಸದಸ್ಯರ ಸಂಖ್ಯೆಗೆ ಸಮನವಾಗಿ ಹೊಸ ಸದಸ್ಯರನ್ನು ಮೇಲ್ಮನೆಗೆ ಕಳುಹಿಸಲು ಕಾಂಗ್ರೆಸ್ ವಿಫಲವಾಗಲಿದೆ ಎನ್ನಲಾಗಿದೆ.
ಬಿಜೆಪಿಯ ಐದು ಕೇಂದ್ರ ಸಚಿವರುಗಳು ವೆಂಕಯ್ಯ ನಾಯ್ಡು, ಪಿಯೂಶ್ ಚಾವ್ಲಾ, ನಿರ್ಮಲಾ ಸೀತಾರಾಮನ್, ಮುಕ್ತಾರ್ ಅಬ್ಬಾಸ್ ನಖ್ವಿ, ವೈಎಸ್ ಚೌಧರಿಯವರು ಕೂಡ ಇಂದೇ ನಿವೃತ್ತರಾಗಲಿದ್ದಾರೆ.
ಆದರೆ ಇವರೆಲ್ಲರೂ ಮರು ಆಯ್ಕೆಗೊಳ್ಳಲಿದ್ದಾರೆ. ಅಲ್ಲದೇ ಬಿಜೆಪಿ ರಾಜ್ಯಸಭೆಯಲ್ಲಿ ತನ್ನ ನಂಬರ್ನ್ನು ಹೆಚ್ಚಿಸಿಕೊಳ್ಳಲಿದೆ. ಆದರೆ ಬಹುಮತ ಪಡೆಯಲು ವಿಫಲವಾಗಲಿದೆ.
ರಾಜಸ್ಥಾನದಲ್ಲಿ ಬೃಹತ್ ಬಹುಮತ ಪಡೆದಿರುವುದರಿಂದ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಲು ಸಹಾಯಕವಾಗಲಿದೆ.
ಸಮಾಜವಾದಿ ಪಕ್ಷ ಕೂಡ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಲಿದೆ. ಅದರ ವಿರೋಧಿ ಪಕ್ಷ ಬಿಎಸ್ಪಿ ಕಳೆದುಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.