ಲಂಡನ್ : ಲಂಡನ್ನಿನಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಮೇ 9 ರಂದು ಆಚರಿಸಲಾಯಿತು. ಬಿಟ್ರನ್ ಕೌನ್ಸಿಲ್ ಅನುಮತಿಯೊಂದಿಗೆ ಆಚರಿಸಲಾದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಚಿವ ಆಂಜನೇಯ ಪ್ರಸಾದ್ ಮತ್ತು ಯೋಗ ಗುರು ಡಾ. ಎಚ್. ಆರ್ ನಾಗೇಂದ್ರ ಅವರು ಕರ್ನಾಟಕದಿಂದ ಪಾಲ್ಗೊಂಡಿದ್ದರು.
2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರ ಪುತ್ಥಳಿಯನ್ನು ಲಂಡನ್ನಿನ ಥೇಮ್ಸ್ ನದಿದಂಡೆಯ ಮೇಲೆ ಅನಾವರಣಗೊಳಿಸಿದ್ದರು. ಪುತ್ಥಳಿ ಅನಾವರಣದ ಬಳಿಕ ಇಂದು ಮೊದಲ ವರ್ಷದ ಬಸವ ಜಯಂತಿ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಈ ಬಾರಿ 882 ನೇ ಬಸವಣ್ಣನವರ ಜಯಂತಿಯಾಗಿದೆ. ಬ್ರಿಟನ್ನಲ್ಲಿ ಬೇರೆ ರಾಷ್ಟ್ರದ ನಾಯಕನ ಪ್ರತಿಮೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ಬಸವಣ್ಣನರ ಪ್ರತಿಮೆಗಿದೆ. ವಿಶ್ವ ಸಮುದಾಯಕ್ಕೆ ಸಮಾನತೆ ಮತ್ತು ಸೌಹಾರ್ದತೆ ಬಗ್ಗೆ ಬಸವಣ್ಣನವರ ಕೊಡುಗೆ ಅಪಾರ. ವಚನ ಸಾಹಿತ್ಯದ ಮೂಲಕ ಕಂದಾಚಾರಗಳನ್ನು ದೂರಮಾಡುವಲ್ಲಿ ಬಸನಣ್ಣನವರ ಕೊಡುಗೆ ಅನನ್ಯ.
ಲಂಡನ್ನಿನ ಬಸವೇಶ್ವರ ಪ್ರತಿಷ್ಠಾನ, ಈ ಬಾರಿಯ ಬಸವ ಜಯಂತಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಗುರು ಡಾ.ಎಚ್.ಆರ್. ನಾಗೇಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರನ್ನು ವಿಶೇಷ ಅತಿಥಿಗಳಾಗಿ ಆಗಮಿಸುವಂತೆ ಆಹ್ವಾನಿಸಿತ್ತು.
ಕಾರ್ಯಕ್ರಮದಲ್ಲಿ ಡಾ. ನೀರಜ್ ಪಟೇಲ್, ರೊ. ಕೈತ್ ವಾಜ್, ಸಿ. ಬಿ. ಪಟೇಲ್ ಸೇರಿದಂತೆ ಹಲವು ಗಣ್ಯರು ಹಾಗೂ ಬಸವೇಶ್ವರ ಪ್ರತಿಷ್ಠಾನದ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬರದಿಂದ ತತ್ತರಿಸಿರುವ ರೈತರಿಗಾಗಿ ನಿಧಿ ಸಂಗ್ರಹ ಮಾಡಲಾಗಿದ್ದು, ಅದನ್ನು ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.