ಕೊಯಂಬತ್ತೂರು: ಈ ಬಾರಿಯ ಬೇಸಿಗೆ ರಜೆಯನ್ನು ವಿಶೇಷವಾಗಿ ಸೆಲಬ್ರೇಟ್ ಮಾಡಿಕೊಳ್ಳಬೇಕೆಂಬ ಮಹದಾಸೆ 12 ವರ್ಷದ ಈ ಪುಟ್ಟ ಪೋರನದ್ದಾಗಿತ್ತು. ಆತನಿಗೆ ಕಣ್ಣು ಕಾಣುವುದಿಲ್ಲ ಆದರೆ ಒಂದು ಕನಸಿತ್ತು, ಅದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕೆಂಬುದು.
ಆತನ ಆ ಕನಸು ಶುಕ್ರವಾರ ಕೊಯಂಬತ್ತೂರು ವಿಮಾನ ನಿಲ್ದಾಣದಲ್ಲಿ ನೆರವೇರಿದೆ.
ಶಬರಿ ವೆಂಕಟ್ಗೆ ಮೋದಿಯನ್ನು ಭೇಟಿಯಾಗಿ ಮಾತನಾಡಬೇಕೆಂಬ ಕನಸಿತ್ತು. 2015 ರ ಡಿಸೆಂಬರ್ನಲ್ಲಿ ಈತ ಕೇಂದ್ರ ನಿಡುವ ’ಬೆಸ್ಟ್ ಕ್ರಿಯೇಟಿವ್ ಚೈಲ್ಡ್ ಅವಾರ್ಡ್’ಗೆ ಭಾಜನನಾಗಿದ್ದ. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೋದಿ ಆಗಮಿಸಬೇಕಿತ್ತು. ಆದರೆ ಚೆನ್ನೈ ನೆರೆಯಿಂದಾಗಿ ಅವರು ಬರಲಾಗಲಿಲ್ಲ. ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಶಸ್ತಿ ನೀಡಿದ್ದರು.
ಆದರೆ ಶಬರಿಗೆ ಮೋದಿಯಿಂದ ಆವಾರ್ಡ್ ಪಡೆದುಕೊಳ್ಳಬೇಕೆಂಬ ಆಸೆ ಇತ್ತು, ಹೀಗಾಗಿ ಆತ ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದು ತನ್ನ ಆಸೆಯನ್ನು ತಿಳಿಸಿದ್ದ.
ಅದರಂತೆ ಇದೀಗ ಪ್ರಧಾನಿ ಸಚಿವಾಲಯದಿಂದ ಗುರುವಾರ ಶಬರಿಗೆ ಕರೆ ಬಂದಿತ್ತು, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕೊಯಂಬತ್ತೂರು ವಿಮಾನನಿಲ್ದಾಣಕ್ಕೆ ಆಗಮಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅಲ್ಲಿಗೆ ಹೋದ ಶಬರಿಗೆ ಮೋದಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು.
ಜೀವನದ ಅತೀದೊಡ್ಡ ಕನಸನ್ನು ನನಸಾಗಿಸಿಕೊಂಡ ಶಬರಿ ಮೋದಿಗೆ ವಿವೇಕಾನಂದರ ಒಂದು ಕಥೆ ಹೇಳಿ ಶಾಬ್ಬಾಸ್ಗಿರಿ ಗಿಟ್ಟಿಸಿಕೊಂಡ, ಅಷ್ಟೇ ಅಲ್ಲದೇ ನಿಮ್ಮನ್ನು ಭೇಟಿಯಾಗುವುದೇ ನನ್ನ ಜೀವನದ ಕನಸಾಗಿತ್ತು ಎಂದು ಹೇಳಿಕೊಂಡಿದ್ದಾನೆ.
ಭವಿಷ್ಯದಲ್ಲಿ ಐಎಎಸ್ ಆಫೀಸರ್ ಆಗಬೇಕೆಂಬ ಆಸೆ ಶಬರಿಯದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.