ನವದೆಹಲಿ: ಉತ್ತರಾಖಂಡ ವಿಧಾನಸಭೆಯಲ್ಲಿ ಸುಪ್ರೀಂಕೋರ್ಟ್ ಪರಿಶೀಲನೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಡೆಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಮೇ 10ರಂದು ಬಹುಮತ ಸಾಬೀತು ನಡೆಯಲಿದೆ. ಆದರೆ ಉಚ್ಛಾಟಿತ 9 ಕಾಂಗ್ರೆಸ್ ಸದಸ್ಯರು ಇದರಲ್ಲಿ ಭಾಗವಹಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
ಹರೀಶ್ ರಾವತ್ ನೇತೃತ್ವ ಕಾಂಗ್ರೆಸ್ ಸರ್ಕಾರ ಉತ್ತರಾಖಂಡದಲ್ಲಿ ಬಹುಮತ ಕಳೆದುಕೊಂಡ ಹಿನ್ನಲೆಯಲ್ಲಿ ಕೇಂದ್ರ ಅಲ್ಲಿ ಮಾ.27ರಂದು ರಾಷ್ಟ್ರಪತಿ ಆಡಳಿತವನ್ನು ಹೇರಿತ್ತು. ಇದೀಗ ಅಲ್ಲಿನ ಸರ್ಕಾರ ಬಹುಮತ ಸಾಬೀತಿಗೆ ಮುಂದಾಗಿದೆ.
ಈ ಸಂದರ್ಭ ಕೇಂದ್ರ ಸರಕಾರ ನಿವೃತ ಚುನಾವಣಾ ಆಯುಕ್ತರನ್ನು ವೀಕ್ಷಕರನ್ನಾಗಿ ನೇಮಿಸಬೇಕು ಎಂಬ ಸಲಹೆಗೆ ಸುಪ್ರೀಂ ನಿರಾಕರಿಸಿದ್ದು , ಈ ಬಹುಮತ ಪರೀಕ್ಷೆಯ ವೇಳೆ ವಿಧಾನ ಸಭೆ ಕಾರ್ಯದರ್ಶಿ ಮತ್ತು ಡಿಜಿಪಿ ನೇತ್ರತ್ವದಲ್ಲಿ ವಿಡಿಯೋ ಚಿತ್ರೀಕರಣಗೊಳಿಸಿ ಮತ್ತು ಬಹುಮತ ಪರೀಕ್ಷೆಯ ವರದಿಯನ್ನು ಮಟ್ಟಿದ ಲಕೋಟೆಯಲ್ಲಿ ಕೋರ್ಟ್ಗೆ ಸಲ್ಲಿಸಲು ತಿಳಿಸಿದೆ.
ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಸದನದಲ್ಲಿ ಗಲಾಟೆ ಗದ್ದಲ ನಡೆಯುವಂತಿಲ್ಲ . ಶಾಂತಿಯುತ ರೀತಿಯಲ್ಲಿ ನಡೆಯಬೇಕಾಗಿದ್ದು , ಅಂತದೇನಾದರೂ ನಡೆದರೆ ಕೋರ್ಟ್ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.