ಬೆಂಗಳೂರು: ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನ ಕಂಪೆನಿ ಕ್ಯಾಂಟೀನ್ ಮುಂಭಾಗ ಹಾಕಿರುವ ಸೂಚನಾ ಫಲಕದ ಈ ಸಂದೇಶ ಕ್ಯಾಂಟೀನ್ಗೆ ಬರುವ ಇತರರು ಆಹಾರ ಆರ್ಡರ್ ಮಾಡುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡಿದೆ.
ಈ ಸೂಚನಾ ಫಲಕದಲ್ಲಿ ‘ನೀವು ತಿನ್ನಲು ಸಾಧ್ಯವಾದುದನ್ನೆಲ್ಲ ಕೊಳ್ಳಿರಿ, ಆದರೆ ತೆಗೆದುಕೊಂಡದ್ದನ್ನೆಲ್ಲಾ ತಿನ್ನಿರಿ’ ಎಂದು ನಮೂದಿಸಲಾಗಿದೆ. ಅಲ್ಲದೇ ‘ಹಿಂದಿನ ದಿನ ಪೋಲಾದ ಆಹಾರ ಪದಾರ್ಥ 45 ಕೆಜಿ ಆಗಿತ್ತು. ಇದು ಹಸಿವಿನಿಂದ ಬಳಲುತ್ತಿರುವ 180 ಬಡ ಜನರು ಸೇವಿಸುವಷ್ಟಿತ್ತು’ ಎಂದೂ ಈ ಫಲಕದಲ್ಲಿ ಸೂಚಿಸಲಾಗಿದೆ. ಈ ಅಂಕಿ-ಅಂಶಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ.
ಈ ಫಲಕದಲ್ಲಿ ನಮೂದಿಸಿರುವ ವಾಕ್ಯಗಳು ನಿಜಕ್ಕೂ ಎಲ್ಲರನ್ನೂ ಯೋಚಿಸುವಂತೆ ಮಾಡುತ್ತದೆ. ಕ್ಯಾಂಟಿನ್, ಹೋಟೆಲ್ ಹೋದಾಗ ಎಷ್ಟೋ ಬಾರಿ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡು ಅದನ್ನು ತಿನ್ನದೆ ಹಾಗೇ ಬಿಟ್ಟು ಬರುವುದು ಹಲವು ಬಾರಿ, ಹಲವು ಜನರು ಮಾಡಿರುತ್ತಾರೆ. ಹಾಗೆ ತಟ್ಟೆಯಲ್ಲಿ ಉಳಿದಿರುವುದು ವೇಸ್ಟ್ ಆಗಿ ಬಿಸಾಡಬೇಕಾಗುತ್ತದೇ ವಿನಹ ಮತ್ತೆ ಬಳಸಲಂತೂ ಅಸಾಧ್ಯ. ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡು ವೇಸ್ಟ್ ಮಾಡುವ ಬದಲು ನಮಗೆಷ್ಟು ಬೇಕೋ ಅಷ್ಟೇ ಆಹಾರವನ್ನು ತೆಗೆದುಕೊಂಡು ವೇಸ್ಟ್ ಮಾಡದಿರಿ ಎನ್ನುವ ಅರ್ಥಗರ್ಭಿತ ಸಂದೇಶವನ್ನು ಟಿಸಿಎಸ್ ಕ್ಯಾಂಟೀನ್ ಮುಂಭಾಗ ಹಾಕಿರುವ ಫಲಕ ಹೇಳುತ್ತದೆ.
ಅದೆಷ್ಟೋ ಜನರು ಒಂದು ಹೊತ್ತಿನ ಊಟವಿಲ್ಲದೆ ಬಳಲುತ್ತಿರುವವರು ನಮಗರಿವಿಲ್ಲದಷ್ಟಿದ್ದಾರೆ. ಸ್ಥಿತಿವಂತರು ಬೇಕಾಬಿಟ್ಟಿ ಖರೀದಿಸಿ ಅದನ್ನು ವೇಸ್ಟ್ ಮಾಡುವ ಬದಲು ಹಿತಮಿತವಾಗಿ ಬಳಸಿದರೆ ಎಷ್ಟು ಉತ್ತಮ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.