ಮುಂಬಯಿ: ಮುಂಬಯಿಯ ವಿಲೆ ಪಾರ್ಲೆಯಲ್ಲಿ 3,500ಕ್ಕೂ ಅಧಿಕ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಇಟ್ಟು ಮಾರಾಟ ಮಾಡುತ್ತಿರುವ ಸಂತೋಷ್ ಪಾಂಡೆ, ಮುಂದಿನ ತಿಂಗಳು ತನ್ನದೇ ಆದ ಚೊಚ್ಚಲ ಕಾದಂಬರಿ ‘ಕರ್ಮಾಯಣ್’ ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕವು ರಾವಣನ ಕೆಲವು ರಹಸ್ಯ ಕಥೆಗಳನ್ನು ಹೊಂದಿದೆ.
ಸಂತೋಷ್ನ ಪೋಷರು ಆತನನ್ನು ಶಾಲೆಗೆ ಕಳುಹಿಸಲು ತಿಂಗಳಿಗೆ 6 ರೂ. ನೀಡಲೂ ಅಶಕ್ತರಾಗಿದ್ದ ಕಾರಣ ಆತ 7ನೇ ತರಗತಿಯಲ್ಲೇ ಶಾಲೆ ತೊರೆದಿದ್ದನು. ಬಳಿಕ ಉತ್ತರಪ್ರದೇಶದ ಅಮಣಿ ಪಾಂಡೆಪುರ್ನಿಂದ ಮುಂಬಯಿಗೆ ತೆರಳಿದ್ದನು.
ಕೆಲ ಸಮಯದ ನಂತರ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಮಾರಾಟ ಮಾಡುವ ಸಣ್ಣದೊಂದು ಅಂಗಡಿಯನ್ನು ಪ್ರಾರಂಭಿಸಿದ. ಪ್ರತಿನಿತ್ಯ ನೂರಾರು ಮಂದಿ ಸಂತೋಷ್ನ ಪುಸ್ತಕದ ಅಂಗಡಿಗೆ ಭೇಟಿ ನೀಡುತ್ತಿದ್ದು, ಸಲಹೆಗಳನ್ನೂ ನೀಡುತ್ತಾರೆ. ಸಂತೋಷನಿಗಿರುವ ಪುಸ್ತಕದ ಒಲವನ್ನು ಅರಿತವರು ಆತ ಪುಸ್ತಕ ಬರೆಯುವುದಕ್ಕೆ ಬೆಂಬಲವನ್ನೂ ಸೂಚಿಸಿದ್ದಾರೆ.
ರಾಮಾಯಣದ ಹಲವು ಭಾಗಗಳನ್ನು ಓದಿದ ಬಳಿಕ ಉತ್ತಮ ಶಿಕ್ಷಣ ಪಡೆದಿದ್ದ ರಾವಣ ಕೆಟ್ಟ ಗುಣಗಳನ್ನು ಹೊಂದಲು ಕಾರಣಗಳೇನು? ಎಂಬ ಯೋಚನೆ ಮೂಡಿತು. ಓರ್ವ ಸಾಮಾನ್ಯ ಬ್ರಾಹ್ಮಣನ ಮಗನಾಗಿದ್ದ ರಾವಣ ತನ್ನ ಕರ್ಮ ಮತ್ತು ಸಾಧನೆಗಳಿಂದ ಶ್ರೇಷ್ಠ ರಾಜನಾಗಲು ಸಾಧ್ಯವಾದುದರ ಬಗ್ಗೆ ತಿಳಿಯುವ ಉತ್ಸುಕತೆ ಹೊಂದಿದೆ. ತದನಂತರ ನನಗೆ ಅನ್ನಿಸಿದ್ದನ್ನು ನಾನು ಬರಹ ರೂಪದಲ್ಲಿಳಿಸಲು 4 ವರ್ಷಗಳ ಹಿಂದೆ ಈ ಪುಸ್ತಕವನ್ನು ಬರೆಯಲು ಆರಂಭಿಸಿರುವುದಾಗಿ ಸಂತೋಷ್ ಹೇಳಿದ್ದಾರೆ.
ಹಿಂದಿ ಭಾಷೆಯಲ್ಲಿ ಬರೆದಿರುವ ಈ ಪುಸ್ತಕವನ್ನು ಸಹ ಲೇಖಕ ವಿನೋದ್ ಚೆರಿಯನ್ ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಲು ಸಹಕರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.