ನವದೆಹಲಿ: ಪಠಾನ್ಕೋಟ್ ಮೇಲೆ ನಡೆದ ದಾಳಿಯ ವೇಳೆ ಮೃತರಾದ ನಾಲ್ವರು ಭಯೋತ್ಪಾದಕರ ಮೃತದೇಹವನ್ನು ಬುಧವಾರ ಮಣ್ಣು ಮಾಡಲಾಗಿದೆ. ಘಟನೆ ನಡೆದು ನಾಲ್ಕು ವಾರಗಳ ಬಳಿಕ ಈ ಕಾರ್ಯ ನಡೆದಿದೆ.
ಮೇ 4ರ ಮುಸುಕಿನ ಜಾವ 2 ಗಂಟೆಗೆ ಮುಸ್ಲಿಂ ಶವಸಂಸ್ಕಾರ ಮೈದಾನದಲ್ಲಿ ಭಯೋತ್ಪಾದಕರ ಹೆಣವನ್ನು ಪಂಜಾಬ್ ಪೊಲೀಸರು ಮಣ್ಣು ಮಾಡಿದರು.
ತನ್ನ ದೇಶದಲ್ಲೇ ಎಫ್ಐಆರ್ ದಾಖಲಾದರೂ ಈ ಮೃತದೇಹಗಳಿಗಾಗಿ ಬೇಡಿಕೆಯನ್ನು ಪಾಕಿಸ್ಥಾನ ಇಟ್ಟಿಲ್ಲ, ಪಠಾನ್ಕೋಟ್ ದಾಳಿಯ ತನಿಖೆಗೆ ಆಗಮಿಸಿದ್ದ ಪಾಕ್ ಜಂಟಿ ತನಿಖಾ ತಂಡ ಕೂಡ ಮೃತದೇಹಗಳನ್ನು ನೋಡುವ ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.
7 ಭದ್ರತಾ ಸಿಬ್ಬಂದಿ, 4 ಉಗ್ರರು ಈ ದಾಳಿಯಲ್ಲಿ ಮೃತರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.