ಜೈಪುರ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಇನ್ನೂ ನ್ಯಾಯ ಸಿಗದೆ ಪರದಾಡುತ್ತಿರುವ ಅಣ್ಣನೊಬ್ಬ ಮನಕಲಕುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಅಂಗಲಾಚಿದ್ದಾನೆ.
ನನ್ನ 12 ವರ್ಷದ ತಂಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ, ಇನ್ನೂ ದುಷ್ಕರ್ಮಿಗಳು ಹೊರಗಿದ್ದಾರೆ. ದಯವಿಟ್ಟು ಮೋದಿ ಅಂಕಲ್ ನಮಗೆ ಸಹಾಯ ಮಾಡಿ ಎಂದು ಜೈಪುರದ 16 ವರ್ಷದ ಬಾಲಕನೊಬ್ಬ ಪ್ರಧಾನಿಯವರಿಗೆ ಪತ್ರ ಬರೆದಿದ್ದಾನೆ.
’ಅಂಕಲ್, ಬಲೋತ್ರ ಪೊಲೀಸ್ ಸ್ಟೇಶನ್ ನನ್ನ ಸಹೋದರಿಯನ್ನು ಗ್ಯಾಂಗ್ರೇಪ್ ಮಾಡಿದ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ. ಬಡ ಕುಟುಂಬಕ್ಕೆ ನಾವು ಸೇರಿದ ಹಿನ್ನಲೆಯಲ್ಲಿ ಯಾರೊಬ್ಬರೂ ನಮ್ಮ ಮಾತನ್ನು ಕೇಳುತ್ತಿಲ್ಲ, ಸಹಾಯ ಮಾಡುತ್ತಿಲ್ಲ’ ಎಂದು ಪತ್ರ ಬರೆದಿದ್ದಾನೆ.
ಜಿಲ್ಲಾಧಿಕಾರಿಯವರ ಬಳಿ ಹೋಗಿಯೂ ಸಹಾಯಕ್ಕೆ ಅಂಗಲಾಚಿದೆ. ಆದರೆ ಅವರು ನಮಗೆ ಸಹಾಯ ಮಾಡುವ ಬದಲು ನಮ್ಮ ಬಡತನವನ್ನೇ ಗೇಲಿ ಮಾಡಿದರು ಎಂದು ಬೇಸರ ತೋಡಿಕೊಂಡಿದ್ದಾನೆ.
ಒಂದು ಕಡೆ ನಿಮ್ಮ ಸರ್ಕಾರ ಬೇಟಿ ಬಚಾವೋ ಆಂದೋಲನ ನಡೆಸುತ್ತಿದೆ, ಆದರೆ ರಾಜಸ್ಥಾನ ಸರ್ಕಾರಕ್ಕೆ ಇದಕ್ಕೆ ಮನ್ನಣೆ ಕೊಡದೆ ಅತ್ಯಾಚಾರಿಗಳನ್ನು ಸುಮ್ಮನೆ ಬಿಟ್ಟಿದೆ ಎಂದು ಆರೋಪಿಸಿದ್ದಾನೆ.
ಆತನ ಪತ್ರಕ್ಕೆ ಪ್ರಧಾನಿಯಿಂದ ಉತ್ತರ ಬಂದೇ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಆತನಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.