ಲಕ್ನೋ: ಉತ್ತರಪ್ರದೇಶದ ಸವಮಾಜವಾದಿ ಸರ್ಕಾರ ಕಾರ್ಮಿಕರಿಗಾಗಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕ ಕ್ಯಾಂಟೀನನ್ನು ಉದ್ಘಾಟನೆಗೊಳಿಸಿದೆ, ಇಲ್ಲಿ ಥಾಲಿ ಕೇವಲ 10 ರೂಪಾಯಿಗೆ ದೊರಕಲಿದೆ.
ಲಕ್ನೋದ ಸೆಕ್ರಟರಿಯೇಟ್ ಕಟ್ಟಡದಲ್ಲಿ ಈ ಕ್ಯಾಂಟೀನ್ ಇದ್ದು, ಸಿಎಂ ಅಖಿಲೇಶ್ ಕುಮಾರ್ ಯಾದವ್ ಇದಕ್ಕೆ ಚಾಲನೆ ನೀಡಿದ್ದಾರೆ.
ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಆಹಾರಗಳು ಕಾರ್ಮಿಕ ವರ್ಗದವರಿಗೆ ಸಿಗಲಿ ಎಂಬ ಕಾರಣಕ್ಕೆ ಈ ಕ್ಯಾಂಟೀನ್ ತೆರೆಯಲಾಗಿದೆ.
ಅಲ್ಲಿನ ಸರ್ಕಾರ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ತಿಂಗಳಿಗೆ 1 ಸಾವಿರ ಪಿಂಚಣಿಯನ್ನು ನೀಡಲೂ ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.