ಲಕ್ನೋ: 2017ರಲ್ಲಿ ದೇಶ ಅತೀದೊಡ್ಡ ರಾಜ್ಯ ಎನಿಸಿಕೊಂಡ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಶತಾಯ ಗತಾಯ ಪ್ರಯತ್ನ ನಡೆಸುತ್ತಿವೆ. ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್ ತಮ್ಮ ಅಧಿನಾಯಕರಾದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿಯವರನ್ನೇ ಸಿಎಂ ಅಭ್ಯರ್ಥಿಯನ್ನಾಗಿಸುವ ಯೋಚನೆಯಲ್ಲಿದೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕಳೆದುಕೊಂಡಿರುವ ಗತವೈಭವವನ್ನು ಮತ್ತೆ ಮರಳಿಸುವ ಹೊಣೆಹೊತ್ತುಕೊಂಡಿರುವ ರಾಜಕೀಯ ಪಂಡಿತ ಪ್ರಶಾಂತ್ ಕಿಶೋರ್ ಪ್ರಿಯಾಂಕ ಅಥವಾ ರಾಹುಲ್ರನ್ನು ಸಿಎಂ ಅಭ್ಯರ್ಥಿಯನ್ನಾಗಿಸಲು ಬಯಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಇವರಿಬ್ಬರು ಒಪ್ಪದೇ ಹೋದರೆ ಬ್ರಾಹ್ಮಣ ಮುಖವೊಂದನ್ನು ಸಿಎಂ ಅಭ್ಯರ್ಥಿಯನ್ನಾಗಿಸುವ ಚಿಂತನೆ ಪ್ರಶಾಂತ್ ಕಿಶೋರ್ ಅವರದ್ದು ಎನ್ನಲಾಗಿದೆ.
ಈ ರಾಜ್ಯದಲ್ಲಿ ಒಂದು ಕಾಲದಲ್ಲಿ ಎಲ್ಲಾ ಸ್ಥಾನಗಳಲ್ಲೂ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದ ಕಾಂಗ್ರೆಸ್ ಇದೀಗ ಪರದಾಟ ನಡೆಸುತ್ತಿದೆ. ಲೋಕಸಭೆಯಲ್ಲಂತು ಹೀನಾಯವಾಗಿ ಸೋಲುಂಡಿತ್ತು.
ರಾಹುಲ್, ಪ್ರಿಯಾಂಕ ಸಿಎಂ ಅಭ್ಯರ್ಥಿಯಾಗದಿದ್ದರೂ ಅವರನ್ನು ಪ್ರಚಾರ ಕಾರ್ಯದ ನೇತೃತ್ವ ವಹಿಸುವಂತೆ ಕಾಂಗ್ರೆಸ್ ಮಾಡುವುದು ಮಾತ್ರ ಸ್ಪಷ್ಟ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.