ನಾಗ್ಪುರ: ದೇಗುಲಗಳಿಗೆ ಮಹಿಳಾ ಪ್ರವೇಶವನ್ನು ಪ್ರತಿಪಾದಿಸಿರುವ ಆರ್ಎಸ್ಎಸ್, ಇದೀಗ ಆಡಂಬರದ ಕಾರ್ಯಕ್ರಮಗಳಿಗೆ ಹಣ ಪೋಲು ಮಾಡುವ ಬದಲು ಆರೋಗ್ಯ, ಶಿಕ್ಷಣದತ್ತ ಗಮನವಹಿಸುವಂತೆ ದೇಗುಲಗಳಿಗೆ ಕಿವಿಮಾತು ಹೇಳಿದೆ.
ಮಿಮಿಕ್ರಿ ಶೋ, ಪಟಾಕಿ ಸುಡುವಿಕೆ, ಸಿನಿಮಾ ಶೋ, ಪ್ರಾಣಿಗಳ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಿಗೆ ಸುಖಾಸುಮ್ಮನೆ ಹಣವನ್ನು ವ್ಯಯಿಸುವ ಬದಲು ಆರೋಗ್ಯ, ಶಿಕ್ಷಣದಂತಹ ಚಾರಿಟಿ ಕಾರ್ಯಗಳಿಗೆ ಹಣ ಉಪಯೋಗಿಸುವಂತೆ ದೇಗುಲಗಳಿಗೆ ಆರ್ಎಸ್ಎಸ್ ಸಲಹೆ ನೀಡಿದೆ.
ಮಿಮಿಕ್ರಿ, ಮ್ಯಾಜಿಕ್ ಶೋಗಳಿಗೆ ದೇಗುಲ ಆಡಳಿತ ಮಂಡಳಿಗಳು ಲಕ್ಷಾಂತರ ವ್ಯಯ ಮಾಡುತ್ತವೆ, ಬಳಿಕ ಇದಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಎನ್ನುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಂಪ್ರದಾಯಿಕವಾಗಿ, ಅಶ್ಲೀಲತೆಗೆ ಆಸ್ಪದ ಇಲ್ಲದಂತೆ ಸೀಮಿತ ಗಡಿಯೊಳಗೆ ನಡೆಸಬೇಕು ಎಂದು ಆರ್ಎಸ್ಎಸ್ ಪ್ರಚಾರ ಪ್ರಮುಖ್ ಜೆ ನಂದಕುಮಾರ್ ಹೇಳಿದ್ದಾರೆ.
ಇತ್ತೀಚಿಗಷ್ಟೇ ಮಹಿಳೆಯರಿಗೆ ದೇಗುಲ ಪ್ರವೇಶಿಸಲು ನಿಯಂತ್ರಣ ಹೇರುವುದು ಸಮಂಜಸವಲ್ಲ, ಈ ರೀತಿ ಮಾಡುವ ದೇಗುಲ ಆಡಳಿತ ಮಂಡಳಿ ತನ್ನ ಮನಸ್ಥಿತಿಯನ್ನು ಬದಲಾಯಿಸಬೇಕು ಎಂದು ಆರ್ಎಸ್ಎಸ್ ಅಭಿಪ್ರಾಯ ವ್ಯಕ್ತಪಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.