News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಹುಲ್ ಗಾಂಧಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನ!

rahulಲಕ್ನೋ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನಾಪತ್ತೆಯಾಗಿದ್ದಾರೆ, ದಯವಿಟ್ಟು ಅವರನ್ನು ಹುಡುಕಿಕೊಡಿ ಎಂಬ ಬ್ಯಾನರ್‌ಗಳು ಉತ್ತರಪ್ರದೇಶದಾದ್ಯಂತ ರಾರಾಜಿಸುತ್ತಿವೆ. ಕಳೆದ ಒಂದು ತಿಂಗಳಿನಿಂದ ಅಜ್ಞಾತರಾಗಿರುವ ರಾಹುಲ್ ಮತ್ತು ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಅವರ ಪಕ್ಷಕ್ಕೆ ಟಾಂಗ್ ಕೊಡುವ ಉದ್ದೇಶದಿಂದ ಇಂತಹ ಬ್ಯಾನರ್‌ಗಳನ್ನು ಹಾಕಲಾಗಿದೆ.

ರಾಹುಲ್ ಅವರ ಲೋಕಸಭಾ ಕ್ಷೇತ್ರ ಅಮೇಥಿಯಲ್ಲಿಯೇ ಇಂತಹ ಬ್ಯಾನರ್‌ಗಳನ್ನು ಹಾಕಲಾಗಿದ್ದು ಇದರಲ್ಲಿ ‘ಅಮೇಥಿ ವಿತೌಟ್ ಲೀಡರ್’(ನಾಯಕನಿಲ್ಲದ ಅಮೇಥಿ) ಮತ್ತು ಹಿಂದಿ ಗೀತೆ ’ಜಾನೆ ವೋ ಕೌನ್ಸಾ ದೇಶ್, ಜಹಾಣ್ ತುಮ್ ಚಲೇ(ಯಾರಿಗೆ ಗೊತ್ತು ನೀ ಎಲ್ಲಿ ಹೋಗಿದ್ದಿ ಎಂದು) ಎಂದೂ ಬರೆಯಲಾಗಿದೆ. ಅಲ್ಲದೇ ಅಮೇಥಿಯಲ್ಲಿನ ಸಮಸ್ಯೆಗಳ ಪಟ್ಟಿಯನ್ನು ನೀಡಲಾಗಿದೆ. ರಾಹುಲ್ ಅವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ. ಕೊನೆಯಲ್ಲಿ ’ಅಮೇಥಿಯ ಜನರು’ ಎಂದು ಹಲವರ ಸಹಿಯನ್ನು ಹಾಕಲಾಗಿದೆ.

ಇನ್ನೂ ಜಾನ್ಸಿಯಲ್ಲೂ ಇಂತಹುದೇ ಪೋಸ್ಟರ್ ಹಾಕಲಾಗಿದೆ. ಇದರಲ್ಲಿ ಬಿಜೆಪಿ ಸಚಿವೆ ಉಮಾಭಾರತಿ ಮತ್ತು ರಾಹುಲ್ ಇಬ್ಬರನ್ನೂ ಟಾರ್ಗೆಟ್ ಮಾಡಲಾಗಿದೆ.

ಅಲಹಾಬಾದ್‌ನಲ್ಲೂ ರಾಹುಲ್ ಮಿಸ್ಸಿಂಗ್ ಬ್ಯಾನರ್ ಹಾಕಿ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ. ಇಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರೇ ಇಂತಹ ಬ್ಯಾನರ್ ಹಾಕಿದ್ದಾರೆ ಎನ್ನಲಾಗಿದೆ. ಈ ಹಿಂದೆ ಪ್ರಿಯಾಂಕ ಲಾವೋ ಕೂಗು ಇಲ್ಲಿ ಬಹುವಾಗಿ ಕೇಳಿಬಂದಿತ್ತು.

ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾದಂದಿನಿಂದ ರಾಹುಲ್ ನಾಪತ್ತೆಯಾಗಿದ್ದಾರೆ. ಅವರು ರಜೆಯಲ್ಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಅವರು ಎಲ್ಲಿದ್ದಾರೆ ಎಂಬುದನ್ನು ಇದುವರೆಗೆ ಅದು ಬಾಯಿ ಬಿಟ್ಟಿಲ್ಲ. ಅದೇನೆಯಿರಲಿ ರಾಹುಲ್ ಅವರ ಅಜ್ಞಾತ ವಾಸ ಅವರ ಕ್ಷೇತ್ರದ ಜನರ ಆಕ್ರೋಶಕ್ಕೆ ತುತ್ತಾಗಿರುದಂತು ನಿಜ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top