ನವದೆಹಲಿ: ಕೇರಳ ಮೂಲದ ಇಬ್ಬರು ಮೀನುಗಾರರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಟಲಿ ನೌಕಾ ದಳದ ಸಿಬ್ಬಂದಿ ಮಸ್ಸಿಮಿಲಿಯಾನೋ ಲಟೊರ್ರೆಗೆ ಸೆ.30ರವರೆಗೆ ಇಟಲಿಯಲ್ಲೇ ನೆಲೆಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ಕಲ್ಪಿಸಿದೆ.
ಅಲ್ಲದೇ ಎಪ್ರಿಲ್ 30ರೊಳಗೆ ಅಗತ್ಯಬಿದ್ದಾಗ ಭಾರತಕ್ಕೆ ಮರಳುವ ಬಗ್ಗೆ ಬಗ್ಗೆ ಹೊಸ ಮನವಿ ಸಲ್ಲಿಸುವಂತೆ ಆತನಿಗೆ ಸೂಚಿಸಿದೆ.
ಈ ಹಿಂದೆ ಸುಪ್ರೀಂ ಎಪ್ರಿಲ್ 30ರವರೆಗೆ ಮಾತ್ರ ಆತನಿಗೆ ಇಟಲಿಯಲ್ಲಿ ನಿಲ್ಲಲು ಅವಕಾಶ ನೀಡಿತ್ತು.
ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ಪ್ರಕ್ರಿಯೆಗಳು, ಬೆಳವಣಿಗೆಗಳು ನಡೆಯುತ್ತಿವೆ ಎಂಬ ಬಗ್ಗೆ ವಿವರಣೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.
2015ರ ಆಗಸ್ಟ್ನಲ್ಲಿ ಎನ್ರಿಕ ಲೆಕ್ಸಿ ಎಂಬ ಹಡಗಿನಲ್ಲಿದ್ದ ಇಬ್ಬರು ಇಟಲಿಯ ನೌಕಾ ಸಿಬ್ಬಂದಿಗಳು ಕೇರಳದ ಇಬ್ಬರು ಮೀನುಗಾರರನ್ನು ಪೈರೆಟ್ಗಳೆಂದು ತಪ್ಪಾಗಿ ತಿಳಿದು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.