ನವದೆಹಲಿ: ಬೌದ್ಧ ಧರ್ಮಿಯರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ’ಧಮ್ಮ ಚಕ್ರ ಯಾತ್ರ’ವನ್ನು ಅವರು ನಡೆಸಲಿದ್ದಾರೆ.
ಈ ಯಾತ್ರೆಯ ಅಂಗವಾಗಿ ಬೌದ್ಧ ಭಿಕ್ಷುಗಳು ಆರು ತಿಂಗಳುಗಳ ಕಾಲ ಉತ್ತರಪ್ರದೇಶದಾದ್ಯಂತ ಪರ್ಯಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧರ್ಮದ ಕುರಿತ ಚಿಂತನೆಗಳು ಮತ್ತು ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ಪಸರಿಸಲಿದ್ದಾರೆ. ಈ ಅಭಿಯಾನದ ನೇತೃತ್ವವನ್ನು ರಾಜ್ಯಸಭಾ ಸದಸ್ಯ ಡಾ.ಧಮ್ಮ ವಿರಿಯೊ ಮಹತೆರ ಅವರು ವಹಿಸಿದ್ದಾರೆ.
ಎಪ್ರಿಲ್ 23 ರಂದು ಗೃಹಸಚಿವ ರಾಜನಾಥ್ ಸಿಂಗ್ ಯಾತ್ರೆ ಚಾಲನೆ ನೀಡಿದ್ದು, ಅಕ್ಟೋಬರ್ 14 ರವರೆಗೆ ಯಾತ್ರೆ ನಡೆಯಲಿದೆ. ಬೌದ್ಧ ಭಿಕ್ಷುಗಳಿಗೆ ಒಂದು ಟಿ.ವಿ. ಸೆಟ್, CD ಗಳನ್ನು ನೀಡಲಾಗಿದ್ದು ಅದರಲ್ಲಿ ಪ್ರಧಾನಿ ಮೋದಿ ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಅವರ ಬಗೆಗಿನ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿರುವ ಭಾಷಣಗಳಿರಲಿವೆ.
4 ಹಂತದ ಅಭಿಯಾನ ಇದಾಗಿದ್ದು, 70-80 ಭಿಕ್ಷುಗಳು ಇದರಲ್ಲಿ ಭಾಗವಹಿಸಲಿದ್ದಾರೆ, ಆರು ತಿಂಗಳಲ್ಲಿ 70 ಜಿಲ್ಲೆಗಳಿಗೆ ಇದು ಭೇಟಿ ಕೊಡಲಿದೆ. ಪ್ರಧಾನಿ ಸಚಿವಾಲಯ ಈ ಅಭಿಯಾನದ ನೇರ ಪರಿಶೀಲನೆಯನ್ನು ನಡೆಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.