ತನ್ನ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಜರ್ಮನಿಯಲ್ಲಿರುವ ಉದ್ಯೋಗವನ್ನು ತೊರೆದು ತನ್ನ ಗ್ರಾಮಕ್ಕೆ ಮರಳಿದ್ದಾರೆ 38 ವರ್ಷದ ಟೆಕ್ಕಿ ತರುಣ್ ಶೇಖಾವತ್.
ತರುಣ್ ಅವರು ಇಂಜಿನಿಯರ್ ಆಗಿ ಕಳೆದ 12 ವರ್ಷಗಳಿಂದ ಟೆಕ್ ಮಹೀಂದ್ರ, ಟಿಸಿಎಸ್ ಮುಂತಾದ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಜರ್ಮನಿಯ ಮ್ಯೂನಿಚ್ನಲ್ಲಿ ಕಳೆದ 4 ವರ್ಷಗಳಿಂದ ಉದ್ಯೋಗದಲ್ಲಿರುವ ಅವರು, ತನ್ನ ಗ್ರಾಮದ ಅಭಿವೃದ್ಧಿಗಾಗಿ 4500 ಯೂರೋ (ವಾರ್ಷಿಕ 37 ಲಕ್ಷ) ಸಂಬಳದ ಉದ್ಯೋಗಕ್ಕೆ ವಿದಾಯ ಹೇಳಿದ್ದಾರೆ.
ಈ ಗ್ರಾಮ ಹಲವಾರು ಮೂಲಸೌಕರ್ಯದ ಕೊರತೆ ಹೊಂದಿದ್ದು, ತರುಣ್ ಅವರು ಗ್ರಾಮದ ಅಭಿವೃದ್ಧಿ ಮತ್ತು ಸರ್ಕಾರದ ಪರಿಹಾರ ನಿಧಿಯ ಅಕ್ರಮ ಬಳಕೆಯ ಕುರಿತು ಹಲವು ಬಾರಿ ಮಾಹಿತಿ ಹಕ್ಕು ಇಲಾಖೆಗೆ ಪತ್ರ ಬರೆದಿದ್ದಾರೆ.
ಆರ್ಮನಿಯ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ತಿಳಿದಿರುವ ತರುಣ್ ಅದೇ ರೀತಿ ಬಿಜನೋರ್ನ ತನ್ನ ಜುಝೇಲ ಗ್ರಾಮದ ಅಭಿವೃದ್ಧಿಯ ಕನಸು ಕಾಣುತ್ತಿದ್ದಾರೆ. ಗ್ರಾಮದ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಭಾರತದ ಗ್ರಾಮಗಳು ಜರ್ಮನಿ ಅಥವಾ ಇತರ ಐರೋಪ್ಯ ರಾಜ್ಯಗಳಂತೆ ಪ್ರಗತಿಪರವಾಗಲು ಸಾಧ್ಯ ಎಂದು ತರುಣ್ ಹೇಳುತ್ತಾರೆ.
ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಜುಝೇಲ ಗ್ರಾಮದ ಮುಖ್ಯಸ್ಥ(ಗ್ರಾಮದ ಪ್ರಧಾನ್)ರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ವಿದೇಶದ ಉದ್ಯೋಗವನ್ನು ತೊರೆದಿರುವ ತರುಣ್ ನೋಯ್ಡಾದಲ್ಲಿ ಒಂದು ಕಂಪೆನಿ ಸೇರಿಕೊಂಡಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಜಯಿಸಿದಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರದ ನಿಧಿಯನ್ನು ಸಂಪೂರ್ಣವಾಗಿ ಬಳಸುವ ಮೂಲಕ ಮೂಲಸೌಕರ್ಯದ ಕೊರತೆ ಇರುವ ಈ ಗ್ರಾಮವನ್ನು ಬದಲಿಸುವ ಗುರಿ ಹೊಂದಿದ್ದೇನೆ. ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸಿವಿದೆ ಎಂದು ತರುಣ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.