ದೆಹಲಿ: ಪಠಾನ್ಕೋಟ್ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಪಾಕಿಸ್ಥಾನದ ಜಂಟಿ ತನಿಖಾ ತಂಡ ಭಾನುವಾರ ಭಾರತಕ್ಕೆ ಬಂದಿಳಿದಿದೆ.
ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತು ಪಾಕಿಸ್ಥಾನ ಹೈ ಕಮಿಷನರ್ ಈ ತಂಡವನ್ನು ಸ್ವಾಗತಿಸಿದ್ದು, ಮಂಗಳವಾರ ಈ ತಂಡ ಪಠಾನ್ಕೋಟ್ಗೆ ಭೇಟಿ ಕೊಡಲಿದೆ.
ತಂಡದಲ್ಲಿ 5 ಮಂದಿ ಸದಸ್ಯರಿದ್ದು, ಪಾಕ್ನ ಪಂಜಾಬ್ ಪ್ರಾಂತ್ಯದ ಭಯೋತ್ಪಾದನ ನಿಗ್ರಹ ದಳದ ಮುಖ್ಯಸ್ಥ ಮೊಹಮ್ಮದ್ ತಾಹಿರ್ ರಾಯ್ ಇದರ ನೇತೃತ್ವವನ್ನು ವಹಿಸಿದ್ದಾರೆ.
ಪಠಾನ್ಕೋಟ್ ದಾಳಿ ನಡೆಸಿದ್ದು ಪಾಕ್ ಮೂಲದ ಉಗ್ರರು ಎಂಬ ಎಲ್ಲಾ ಸಾಕ್ಷಿಗಳನ್ನು ಭಾರತ ಪಾಕ್ಗೆ ಒದಗಿಸಿತ್ತು. ಈ ಹಿನ್ನಲೆಯಲ್ಲಿ ತನಿಖೆಗೆ ಅಲ್ಲಿ ತಂಡ ರಚಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.