News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮರಕ್ಕೂರುಜನನದ ದೈವಗಳು ಕೃತಿ ಲೋಕಾರ್ಪಣೆ

ಪುತ್ತೂರು : ‘ಬೃಹತ್ ಕೈಗಾರಿಕೆಗಳು ತುಳುನಾಡಿಗೆಪ್ರವೇಶಿಸಿ, ನಮ್ಮ ಹಲವು ಪುಣ್ಯಕ್ಷೇತ್ರಗಳು ಸ್ಥಳಾಂತರವಾಗುತ್ತಿವೆ. ಪಾರಂಪರಿಕ ಮಹತ್ತ್ವವುಳ್ಳ ವಸ್ತುಗಳು, ಭೌತಿಕ ಸಾಮಾಗ್ರಿಗಳು ನಾಶವಾಗುತ್ತಿವೆ.

photo

ಜನಪದ ಸಾಹಿತ್ಯ ಕಣ್ಮರೆಯಾಗುತ್ತಿವೆ. ಇಂಥ ವಿಷಯ ಪರಿಸ್ಥಿತಿಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಸ್ಥಳ ಪುರಾಣ, ಐತಿಹ್ಯಗಳನ್ನು ಕಲೆ ಹಾಕಿ ವಿಶ್ಲೇಷಿಸುವ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ‘ಮರಕ್ಕೂರುಜನನದ ದೈವಗಳು ಕೃತಿ ರಚನೆಯ ಪ್ರಯತ್ನ ಶ್ಲಾಘನೀಯ ವೆಂದುಉಪ್ಪಿನಂಗಡಿಯ ವೈದ್ಯಡಾ| ನಿರಂಜನ ರೈ ಅವರು ಹೇಳಿದರು. ಶ್ರೀ ಕ್ಷೇತ್ರ ಮರಕ್ಕೂರಿನ ವಾರ್ಷಿಕ ಮಹೋತ್ಸವದಲ್ಲಿ ಡಾ| ನವೀನ್‌ಕುಮಾರ್ ಮರಿಕೆ ಹಾಗೂ ಹರೀಶ್ ಮಂಜೊಟ್ಟಿಅವರು ರಚಿಸಿದ ‘ಮರಕ್ಕೂರುಜನನದ ದೈವಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಹಿರಿಯರಾದ ಮಾಯಿಲಪ್ಪ ಪೂಜಾರಿಕೃತಿ ಲೋಕಾರ್ಪಣೆಗೈದರು. ಉದ್ಯಮಿ, ಧಾರ್ಮಿಕ ನೇತಾರಜಯಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಹರೀಶ್ ಮಂಜೊಟ್ಟಿ ಸ್ವಾಗತಿಸಿ, ಪವಿತ್ರಾ ಪ್ರಸ್ತಾವನೆಗೈದರು. ಕ್ಷೇತ್ರದ ಪ್ರಮುಖರಾದ ವಸಂತ ಪೂಜಾರಿ, ಶ್ರೀಧರ ಪೂಜಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನಂದ ಕಾರ್ಯಕ್ರಮ ನಿರೂಪಿಸಿದರು. ವಸಂತಕಲ್ಲರ್ಪೆ ವಂದಿಸಿರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top