ಬೆಂಗಳೂರು: ನೆಲಮಂಗಲದಲ್ಲಿ ಇತ್ತೀಚೆಗೆ ಅಪಘಾತಕ್ಕೊಳಗಾಗಿ ದೇಹ ಎರಡು ಭಾಗವಾದರೂ ಸಮೀಪವಿದ್ದವರಲ್ಲಿ ತನ್ನ ಕಣ್ಣನ್ನು ದಾನ ಮಾಡುವಂತೆ ಹೇಳಿ ಬಾರದ ಲೋಕಕ್ಕೆ ಹೊರಟು ಹೋದ ಎನ್.ಹರೀಶ್ ಇತರರ ಬಾಳಿಗೆ ಬೆಳಕಾದುದು ಮಾತ್ರವಲ್ಲ, ತಮ್ಮ ಊರಿನ ಇಡೀ ಜನರು ಇತರರಿಗೆ ಬೆಳಕು ಕೊಡಲು ಮುಂದಾಗುವಂತೆ ಪ್ರೇರಣೆ ನೀಡಿದ್ದಾರೆ.
ತುಮಕೂರಿನ ಗುಬ್ಬಿ ತಾಲೂಕಿನ ಕರೆಗೋಡನಹಳ್ಳಿಯವರಾದ ಹರೀಶ್ ಬದುಕಿನ ಕೊನೆ ಕ್ಷಣದಲ್ಲಿ ಪರೋಪಕಾರಿಯಾಗಿ ತನ್ನ ಕಣ್ಣನ್ನು ಇತರರ ಬಾಳಿಗೆ ಬೆಳಕಾಗಲು ನೀಡಿದರು. ಅವರ ಈ ಕಾರ್ಯದಿಂದ ಪ್ರೇರಣೆಗೊಂಡು ಇದೀಗ ಅವರ ಊರಿನ 170 ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.
ಯುವಕರು, ವೃದ್ಧರು ಎನ್ನದೇ ಈ ಊರಿನ ಜನ ಕಣ್ಣು ದಾನ ಮಾಡಿದ್ದಾರೆ, ಹರೀಶ್ ತಾಯಿ, ಕುಟುಂಬಿಕರೂ ನೇತ್ರದಾನಕ್ಕೆ ನೋಂದಾವಣೆ ಮಾಡಿಕೊಂಡಿದ್ದಾರೆ.
ಅಪಘಾತಕ್ಕೊಳಗಾಗಿ ಹರೀಶ್ ಅವರ ದೇಹ ಎರಡು ತುಂಡಾಗಿತ್ತು, ಈ ನರಕಯಾತನೆಯ ನಡುವೆಯೂ ತಮ್ಮ ಅಂಗಗಳನ್ನು ದಾನ ಮಾಡುವಂತೆ ಹೇಳಿ ಅವರು ಇಹಲೋಕ ತ್ಯಜಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.