ಮಂಗಳೂರು : ಉತ್ತಮ ಇಂಜಿನಿಯರ್, ಆಡಳಿತಗಾರ, ಕಲಾ ಹಾಗೂ ಕ್ರೀಡಾ ಪೋಷಕ ಮತ್ತು ಶಿಕ್ಷಣ ತಜ್ಞ ಪ್ರೊ.ಪಿ.ಸಿ.ಎಂ. ಕುಂಞಿಯವರ ಅಕಾಲಿಕ ನಿಧನವು ಅತೀವ ದು:ಖವನ್ನು ತಂದಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಕ್ಯಾಪ್ಟನ್ ಕಾರ್ಣಿಕ್ ಅವರು ತನ್ನ ನೆನಪಿನ ಅಂಗಳದಿಂದ ಮಾತನಾಡುತ್ತಾ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು ಹಾಗೂ ಪ್ರೊ. ಕುಂಞಿಯವರು ಒಟ್ಟಿಗೆ ಸಿಂಡಿಕೇಟ್ ಸದಸ್ಯರಾಗಿದ್ದೆವು. ಮಿತ ಭಾಷಿ ಹಾಗೂ ಮೃದು ಸ್ವಾಭಾವದವರಾದ ಇವರು ಜಿಲ್ಲೆಯ ಅನೇಕ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಲೆಮರೆಯ ಕಾಯಿಯ ಹಾಗೆ ತಮ್ಮ ಬೆಂಬಲವನ್ನು ನೀಡುತ್ತಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರದು ಸ್ನೇಹಮಯ ವ್ಯಕ್ತಿತ್ವವಾಗಿತ್ತು ಎಂದು ಅವರನ್ನು ಸ್ಮರಿಸಿದರು.
ಪ್ರೊ. ಕುಂಞಿರವರ ನಿಧನದಿಂದ ಅವರು ಸ್ಥಾಪಿಸಿದ ಅನೇಕ ಸಂಸ್ಥೆಗಳು ಒಬ್ಬ ನೇತಾರನನ್ನು ಕಳೆದುಕೊಂಡಿವೆ. ಅವರ ನಿಧನದ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗದವರಿಗೂ ಹಾಗೂ ಅಭಿಮಾನಿಗಳಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.